ಉಡುಪಿ: ಕೃಷ್ಣ ಮಠಕ್ಕೆ ಚೆನ್ನೈ ಮೂಲದ ದಾನಿಯಿಂದ ಕುದುರೆಗಳ ಕೊಡುಗೆ

Spread the love

ಉಡುಪಿ: ಗೋ ಪಾಲನೆಗೆ  ಹೆಸರಾದ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಪ್ರಥಮ ಬಾರಿಗೆ ಎಂಬಂತೆ 2 ಕುದುರೆಗಳು ಸೇರ್ಪಡೆಯಾಗಿದ್ದು, ಉಡುಪಿ ಮೂಲದ ಚೆನೈಯಲ್ಲಿ ಉದ್ಯಮಿಯಾಗಿರುವ ಬಾಲಕೃಷ್ಣ ಭಟ್ ಎಂಬವರು ರಂಗ (4 ವರ್ಷ) ಮತ್ತು ವಿಠಲ (2 ವರ್ಷ) ಗಂಡು ಕುದುರೆಗಳನ್ನು ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥರಿಗೆ ದಾನವಾಗಿ ನೀಡಿದ್ದಾರೆ.

29-02-2016-horse-temple-udupi 29-02-2016-horse-temple-udupi-001 29-02-2016-horse-temple-udupi-002

ಪೇಜಾವರ ಶ್ರೀಗಳು ಮತ್ತು ಕಿರಿಯ ಯತಿ ಶ್ರೀವಿಶ್ವಪ್ರಸನ್ನ ತೀರ್ಥರೊಂದಿಗೆ ಪರ್ಯಾಯೋತ್ಸವಕ್ಕೆ ಪೂರ್ವಭಾವಿಯಾಗಿ ಚೆನೈಗೆ ಹೋಗಿದ್ದಾಗ ಆತಿಥೇಯರಾಗಿದ್ದ ಬಾಲಕೃಷ್ಣ ಭಟ್ ಅವರ ಗೋಶಾಲೆ ಮತ್ತು ಅಶ್ವಶಾಲೆಯನ್ನು ಕಂಡು ಪ್ರಭಾವಿತರಾಗಿದ್ದರು. ಆಗ ಬಾಲಕೃಷ್ಣ ಭಟ್ ಅವರು 2 ಕುದುರೆಗಳನ್ನು ನೀಡುವುದಾಗಿ ಹೇಳಿದ್ದರು. ಅದರಂತೆ ಈ 2 ಕುದುರೆಗಳು ಮಂಗಳವಾರ ಕೃಷ್ಣಕ್ಕೆ ವಾಹನದಲ್ಲಿ ತಂದೊಪ್ಪಿಸಲಾಗಿದೆ.

  ಈ ಕುದುರೆಗಳನ್ನು ಕೃಷ್ಣ ಮಠದ ಮಹಾದ್ವಾರದಲ್ಲಿ ಪೇಜಾವರ ಮಠದ ಉಭಯ ಶ್ರೀಗಳು ಆರತಿ ಎತ್ತಿ, ಹುಲ್ಲು, ಬಾಳೆಹಣ್ಣು ತಿನ್ನಿಸಿ ಬರಮಾಡಿಕೊಂಡರು.

ಮಾಧ್ಯಮಗಳೊಂದಿಗೆ ಮಾತನಾಡಿದ ಕಿರಿಯ ಶ್ರೀಗಳಾದ ಶ್ರೀವಿಶ್ವಪ್ರಸನ್ನ ತೀರ್ಥರು, ಕೃಷ್ಣಮಠದ ಉತ್ಸಾವಾಧಿಗಳ ಸಂದರ್ಭದಲ್ಲಿ ಈ ಕುದುರೆಗಳನ್ನು ಬಳಸಿಕೊಳ್ಳಲಾಗುವುದು. ಕೃಷ್ಣನ ಅವತಾರಗಳಲ್ಲಿ ಹಯಗ್ರೀವವೂ ಒಂದು, ಈ ಹಿನ್ನೆಲೆಯಲ್ಲಿ ಈ ಹಯ (ಕುದುರೆ)ಗಳು ಕೃಷ್ಣ ಮಠದ ಶೋಭೆಯನ್ನು ಹೆಚ್ಚಿಸಲಿವೆ ಎಂದವರು ಸಂತಸ ವ್ಯಕ್ತಪಡಿಸಿದರು.

  ಈ ಕುದುರೆಗಳನ್ನು ಚೆನೈಯಲ್ಲಿ ಗೌರಿ ಶಂಕರ ಎಂಬವರು ತರಬೇತುಗೊಳಿಸಿದ್ದಾರೆ, ಅವರಿಂದ ಉಡುಪಿಯ ಕೃಷ್ಣ ಎಂಬವರು ಚೆನೈಗೆ ತೆರಳಿ ವಿಶೇಷ ತರಬೇತು ಪಡೆದುಕೊಂಡು ಬಂದಿದ್ದು,ಇಲ್ಲಿ ಈ 2 ಕುದುರೆಗಳ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ.


Spread the love