ಉಡುಪಿ: ಗೆಳೆಯರ ಬಳಗ ಮಾರ್ಪಳ್ಳಿ ಸಾಲಿನ ನೂತನ ಅಧ್ಯಕ್ಷರಾಗಿ ಉಮೇಶ್ ಮಾರ್ಪಳ್ಳಿ ಆಯ್ಕೆ

Spread the love

 

ಉಡುಪಿ:  ಗೆಳೆಯರ ಬಳಗ ಮಾರ್ಪಳ್ಳಿ ಇದರ 2015-16 ನೇ ಸಾಲಿನ ನೂತನ ಅಧ್ಯಕ್ಷರಾಗಿ ಪತ್ರಕರ್ತ ಉಮೇಶ್ ಮಾರ್ಪಳ್ಳಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ

umeshmarpalli

ಅಧ್ಯಕ್ಷರಾದ ವಿಠಲ್ ಸೇರಿಗಾರ್ ಅವರ ಅಧ್ಯಕ್ಷತೆಯಲ್ಲಿ ಸಂಘದ ಕಛೇರಿಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ  2015 ಮತ್ತು 2016 ರ ಸಾಲಿನ  ನೂತನ ಪದಾಧಿಕಾರಿಗಳನ್ನು ಈ ಸಂದರ್ಭ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಗೌರವಾಧ್ಯಕ್ಷ ಕುಂಞುಮೋನು, ಅಧ್ಯಕ್ಷ ಉಮೇಶ ಮಾರ್ಪಳ್ಳಿ, ಉಪಾಧ್ಯಕ್ಷ ವಿಶ್ವಜಿತ್ ಸಿ. ಸಾಲಿಯನ್, ಕಾರ್ಯದರ್ಶಿ ಹರೀಶ್ಚಂದ್ರ , ಜೊತೆ ಕಾರ್ಯದರ್ಶಿ ಗಣೇಶ ದೇವಾಡಿಗ, ಕೋಶಾಧಿಕಾರಿ ಮಂಜುನಾಥ ಶೆಟ್ಟಿಗಾರ್, ಸಾಂಸ್ಕøತಿಕ ಕಾರ್ಯದರ್ಶಿ ವಸಂತ್ ಶೆಟ್ಟಿಗಾರ್, ಜೊತೆ ಸಾಂಸ್ಕøತಿಕ ಕಾರ್ಯದರ್ಶಿ ಸದಾಶಿವ ಆಚಾರ್ಯ, ಕ್ರೀಡಾ ಕಾರ್ಯದರ್ಶಿ ರಾಜೇಶ ಅಲೆವೂರು, ಜೊತೆ ಕ್ರೀಡಾ ಕಾರ್ಯದರ್ಶಿ ವಿಠಲ್ ಸೇರಿಗಾರ್ ,ಸಂಘಟನಾ ಕಾರ್ಯದರ್ಶಿ ನಾಗರಾಜ್ ಶೆಟ್ಟಿಗಾರ್, ಲೆಕ್ಕಪರಿಶೋಧಕರಾಗಿ ರಮೇಶ ಮಾರ್ಪಳ್ಳಿ ಆಯ್ಕೆ ಮಾಡಲಾಯಿತು. ಕಾರ್ಯಕಾರಿ ಸಮಿತಿಗೆ ಕೃಷ್ಣ ಸೇರಿಗಾರ್,ವಿಜಯ್ ಆರ್. ನಾಯಕ್, ಪ್ರಭಾಕರ್ ಶೆಟ್ಟಿಗಾರ್, ಭಾಸ್ಕರ ಶೆಟ್ಟಿಗಾರ್, ಸಂಜೀವ ಪೂಜಾರಿ,ಪಾಡುರಂಗ ನಾಯ್ಕ್, ಪ್ರಶಾಂತ್ ಆಚಾಯ್, ರಫೀಕ್ ಕುಕ್ಕಿಕಟ್ಟೆ, ಪ್ರಸಾದ್ ಸೇರಿಗಾರ್, ಆಯ್ಕೆ ಮಾಡಲಾಯಿತು.


Spread the love