ಉರ್ವಾದಲ್ಲಿ ವಿದ್ಯುತ್ ಸಬ್ ಸ್ಟೇಶನ್ ನಿರ್ಮಾಣಕ್ಕೆ ಭೂಮಿ: ಶಾಸಕ ಜೆ.ಆರ್.ಲೋಬೊ

Spread the love

ಉರ್ವಾದಲ್ಲಿ ವಿದ್ಯುತ್ ಸಬ್ ಸ್ಟೇಶನ್ ನಿರ್ಮಾಣಕ್ಕೆ ಭೂಮಿ: ಶಾಸಕ ಜೆ.ಆರ್.ಲೋಬೊ

ಮಂಗಳೂರು: ವಿದ್ಯುತ್ ವಿತರಣೆಗೆ ನೆರವಾಗುವ ನಿಟ್ಟಿನಲ್ಲಿ ಉರ್ವಾದಲ್ಲಿ ಸಬ್ ಸ್ಟೇಶನ್ ನಿರ್ಮಾಣಕ್ಕೆ ಅಗತ್ಯವಾದ ಭೂಮಿಯನ್ನು ಒದಗಿಸಲಾಗಿದೆ ಎಂದು ಶಾಸಕ ಜೆ.ಆರ್.ಲೋಬೊ ತಿಳಿಸಿದರು.

ಅವರು ಶುಕ್ರವಾರ ಮೆಸ್ಕಾಂ ಸಲಹಾ ಸಮಿತಿ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಎ.ಬಿ.ಶೆಟ್ಟಿ ಸರ್ಕಲ್ ನಿಂದ ಕರಾವಳಿ ವೃತ್ತದ ವರೆಗೆ ಭೂಗತಕೇಬಲ್ ಅಳವಡಿಸಲಾಗುವುದು ಮತ್ತು ಸ್ವಿಚ್ ಆನ್ ಮತ್ತು ಸ್ವೀಚ್ ಆಫ್ ಅಳಡಿಸಲಾಗುವುದು ಎಂದು ತಿಳಿಸಿದ ಶಾಸಕ ಲೋಬೊ ರಸ್ತೆ ಪಕ್ಕದಲ್ಲಿ ನಿರುಪಯುಕ್ತವಾದ ಕಂಬಗಳನ್ನು ತ್ವರಿತವಾಗಿ ತೆರವುಗೊಳಿಸುವಂತೆ ಸೂಚಿಸಿದರು.

jr-lobo

ಬೆಂಗರೆ ಪ್ರದೇಶದಲ್ಲಿ ವಿದ್ಯುತ್ ಸಮಸ್ಯೆಯಿದ್ದು ತ್ವರಿತವಾಗಿ ಪರಿಹಾರ ನೀಡಬೇಕು ಎಂದು ತಿಳಿಸಿದ ಅವರು ಈಗಾಗಲೇ ಸಾಕಷ್ತು ಕ್ರಮಗಳನ್ನು ಕೈಗೊಳ್ಳಲಾಗಿದೆ, ಆದರೂ ಇನ್ನೂ ಸಮಸ್ಯೆ ಇರುವುದಾಗಿ ಹೇಳಿದ ಅವರು ಆದಷ್ಟರಮಟ್ಟಿಗೆ ಜನರು ಪದೇ ಪದೇ ಸಮಸ್ಯೆ ಪರಿಹರಿಸುವಂತೆ ಬೇಡಿಕೆ ಸಲ್ಲಿಸುವುದನ್ನು ತಪ್ಪಿಸುವಂತೆ ಅಧಿಕಾರಿಗಳಿಗೆ ಹೇಳಿದರು.

ಮರಗಳನ್ನು ಕಡಿದು ಸಾಗಿಸಲು ನಗರಪಾಲಿಕೆ ಲಾರಿಯನ್ನು ಕಾಯುವುದನ್ನು ತಪ್ಪಿಸಬೇಕು. ಇಲಾಖೆಯಲ್ಲಿ ಇರುವ ಲಾರಿಯನ್ನು ಮುಂಗಡವಾಗಿ ಗೊತ್ತುಪಡಿಸಿ ಕಾಮಗಾರಿಯಾಗುವ ಕಾಲದಲ್ಲಿ ಮರಸಾಗಿಸಲು ಬಳಕೆ ಮಾಡಬೇಕು ಎಂದು ಸೂಚಿಸಿದ ಲೋಬೊ ಅವರ ಹೇಳಿಕೆಯನ್ನು ಸ್ವೀಕರಿಸಿದ ಅಧಿಕಾರಿಗಳು ತಾವು ನಿರಂತರವಾಗಿ ಪಾಲನೆ ಮಾಡುವುದಾಗಿ ಭರವಸೆ ನೀಡಿದರು.

ಜೆಪ್ಪಿನಮೊಗರು, ಬಜಾಲ್, ಬಿಕರ್ನಕಟ್ಟೆ, ಬಜ್ಜೋಡಿ ಪರಿಸರದ ಬಗ್ಗೆಯೂ ಚರ್ಚಿಸಿದರು.

ಭವಂತಿ ಸ್ಟೀಟ್ ನಿಂದ ರೂಪವಾಣಿವರೆಗೆ ವಿದ್ಯುತ್ ಕಂಬದ ಸಮಸ್ಯೆಯನ್ನು ಪರಿಶೀಲಿಸಿ ಅಗತ್ಯ ಕ್ರಮಕೈಗೊಳ್ಳುವಂತೆ ಶಾಸಕ ಲೋಬೊ ಕೊಟ್ಟಸೂಚನೆಯನ್ನು ಅಧಿಕಾರಿಗಳು ತ್ವರಿತವಾಗಿ ಮಾಡುವ ಭರವಸೆ ನೀಡಿದರು.

ಸಭೆಯಲ್ಲಿ ಮೆಸ್ಕಾಂ ಎಕ್ಸಿಕ್ಯುಟಿವ್ ಇಂಜಿನಿಯರ್ ಮಂಜಪ್ಪ ಹಾಗೂ ದೀಪಕ್ ಉಪಸ್ಥಿತರಿದ್ದರು. ಈ ಸಭೆಯಲ್ಲಿ ಸಲಹಾ ಸಮಿತಿ ಸದಸ್ಯರು ಭಾಗವಹಿಸಿದ್ದರು.

ಅಗತ್ಯವಿದ್ದ ಕಡೆಗಳಲ್ಲಿ ಬಸ್ ವೇ ನಿರ್ಮಾಣ ಮಾಡಿ: ಶಾಸಕ ಜೆ.ಆರ್.ಲೋಬೊ

ಮಂಗಳೂರು: ಮಂಗಳೂರಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ರಸ್ತೆ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು, ಬಸ್ ನಿಲ್ದಾಣಗಳಿಲ್ಲದ ಕಡೆಗಳಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಬಸ್ ವೇ ನಿರ್ಮಾಣ ಮಾಡಬೇಕು ಎಂದು ಶಾಸಕ ಜೆ.ಆರ್.ಲೋಬೊ ಸಹನೆ ಮಾಡಿದರು.

ಮಂಗಳೂರಲ್ಲಿ ವಾಹನಗಳ ದಟ್ಟಣಿ ಹೆಚ್ಚುತ್ತಿರುವ ಹಿನ್ನೆಯಲ್ಲಿ ಅವರು ಇಂದು ಜಿಲಾಧಿಕಾರಿಗಳ ಕಚೀರಿಯಲ್ಲಿ ಟ್ರಾಫ್ಹಿಕ್  ಸಭೆಯನುದ್ದೇಶಿಸಿ ಮಾತನಾಡಿದರು. ಮಂಗಳೂರಲ್ಲಿ ರಸ್ತೆ ಕಾಮಗಾರಿಗಳು ಪೂರ್ಣಗೊಳ್ಳದ ಕಾರಣ ಅಲ್ಲಲ್ಲಿ ವಾಹನಗಳು ನಿಲ್ಲುತ್ತಿವೆ. ಇದು ಸರಿಯಲ್ಲ. ಅರ್ಧದಲ್ಲಿ ಕಾಮಗಾರಿಗಳು ಆಗಿರುವುದರಿಂದ ಸಮಸ್ಯೆಯಾಗುತ್ತಿದೆ. ಆದ್ದರಿಂದ ಅಪೂರ್ಣ ಕಾಮಗಾರಿಗಳನ್ನು ಶೀಘ್ರವಾಗಿ ಮುಗಿಸಬೇಕು ಎಂದರು.

ಬಸ್ ನಿಲುಗಡೆಗೆ ಸರಿಯಾದ ವ್ಯವಸ್ಥೆ ಇಲ್ಲದ ಕಡೆಗಳಲ್ಲಿ ಸುಸಜ್ಜಿತವಾದ ಬಸ್ ವೇ ನಿರ್ಮಾಣ ಮಾಡಬೇಕು ಎಂದು ಹೇಳಿದ ಶಾಸಕ ಲೋಬೊ ಅವರು ಬಂಟ್ಸ್ ಹಾಸ್ಟೆಲ್, ಪಿವಿಎಸ್ ಕಡೆಗಳಲ್ಲಿ ಬಸ್ ವೇ ನಿರ್ಮಿಸುವಂತೆ ಹೇಳಿದರಲ್ಲದೇ ಅಗತ್ಯವಿದ್ದ ಕಡೆಗಳಲ್ಲಿ ಆದಷ್ಟು ಬೇಗನೇ ಈ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು.

ಎಲ್ಲೆಂದರಲ್ಲಿ ಬಸ್ ನಿಲ್ಲಿಸುವುದನ್ನು ಕಟ್ಟುನಿಟ್ಟಾಗಿ ತಡೆಯಬೇಕು. ಬಸ್ ಸಿಬ್ಬಂಧಿಗಳಿಗೆ ಸರಿಯಾದ ತಿಳುವಳಿಕೆ ಕೊಟ್ಟು ಈ ಕೆಲಸದಲ್ಲಿ ಅವರೂ ಪಾಲ್ಗೊಳ್ಳುವಂತೆ ಮಾಡಬೇಕು. ಶಾಲೆ, ಕಾಲೇಜು, ಆಸ್ಪತ್ರೆ ಮುಂತಾದ ಕಡೆಗಳಲ್ಲಿ ಬಸ್ ಗಳು ಕರ್ಕಶ ಹಾರ್ನ್ ಹಾಕದಂತೆ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಜಿಲ್ಲಾಧಿಕಾರಿ ಡಾ.ಜಗದೀಶ್, ಪೊಲೀಸ್ ಆಯುಕ್ತ ಚಂದ್ರಶೇಖರ್, ಎಡಿಸಿ ಕುಮಾರ್, ಮಹಾನಗರ ಪಾಲಿಕೆ ಆಯುಕ್ತ ನಝೀರ್, ಆರ್ ಟಿಒ ಹೆಗಡೆ ಹಾಗೂ ಬಸ್ ಮಾಲೀಕರು, ಸಿಬ್ಬಂಧಿಗಳು ಸಭೆಯಲ್ಲಿದ್ದರು.


Spread the love