ಉಳ್ಳಾಲ : ಎಸ್ಕೆಎಸ್ಸೆಸ್ಸೆಫ್ ದೇರಳಕಟ್ಟೆ ಶಾಖೆಯ ಅಧ್ಯಕ್ಷರಾಗಿ ನೌಫಲ್ ಬಿ. ಆಯ್ಕೆ

Spread the love

ಉಳ್ಳಾಲ ಎಸ್ಕೆಎಸ್ಸೆಸ್ಸೆಫ್ ದೇರಳಕಟ್ಟೆ ಶಾಖೆ ಇದರ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಸಂಘದ ಕಚೇರಿಯಲ್ಲಿ ಉಬೈದುಲ್ಲಾರವರ ಅಧ್ಯಕ್ಷತೆಯಲ್ಲಿ ನಡೆಯಿತು.

Noufal

ಅಧ್ಯಕ್ಷರಾಗಿ ನೌಫಲ್ ಬಿ. ಉಪಾಧ್ಯಕ್ಷರಾಗಿ ಉಬೈದುಲ್ಲಾ, ಯಾಕೂಬ್, ಇರ್ಫಾನ್ ಹುಸೈನ್, ಪ್ರ.ಕಾರ್ಯದರ್ಶಿಯಾಗಿ ಮುಹಮ್ಮದ್ ಮುನ್ಸಿನ್, ಜೊತೆ ಕಾರ್ಯದರ್ಶಿಗಳಾಗಿ ಮುಹಮ್ಮದ್ ಇರ್ಫಾನ್, ನಿಝಾಝ್ ಡಿ.ಎಂ, ವರ್ಕಿಂಗ್ ಕಾರ್ಯದರ್ಶಿಯಾಗಿ ಕೆ.ಯು ಖಲೀಲುರ್ರಹ್ಮಾನ್ ಅರ್ಶದಿ, ಕೋಶಧಿಕಾರಿಯಾಗಿ ಯೂಸುಫ್ ಅಹ್ಮದ್ ಪನೀರ್, ಕ್ಲಸ್ಟರ್ ಪ್ರತಿನಿಧಿಯಾಗಿ ನೌಶಾದ್ ಬದ್ಯಾರ್, ಸಯ್ಯದ್ ಅಲಿ, ಇಬ್ರಾಹಿಂ ಕೊಣಾಜೆ, ಮುಹಮ್ಮದ್ ಪನೀರ್, ಕ್ಯಾಂಪಸ್ ಪ್ರತಿನಿಧಿಯಾಗಿಅಝೀಂ ನಾಟೆಕಲ್, ಫೈರೋಝ್ ಅಹ್ಮದ್, ಹಫೀಝ್ ಡಿ.ಎಂ, ಅಲ್ಫಾಝ್ ಮುಂತಾದವರನ್ನು ಎಸ್ಕೆಎಸ್ಸೆಸ್ಸೆಫ್ ದೇರಳಕಟ್ಟೆ ಶಾಖೆಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಈ ಸಂಧರ್ಭ ಎಸ್ಕೆಎಸ್ಸೆಸ್ಸೆಫ್ ದ.ಕ ಜಿಲ್ಲಾ ಪ್ರತಿನಿಧಿ ಇಸ್ಮಾಯಿಲ್ ಯಮಾನಿ, ಕ್ಲಸ್ಟರ್ ಪ್ರತಿನಿಧಿ ಫಾರೂಖ್ ದಾರಿಮಿ ಉಪಸ್ಥಿತರಿದರು.


Spread the love