ಉಡುಪಿ: ರೈತರ ಆತ್ಮ ವಿಶ್ವಾಸ ವೃದ್ದಿಗೆ ಕಾರ್ಯಕ್ರಮ- ವಿನಯ ಕುಮಾರ್ ಸೊರಕೆ

Spread the love

 ಉಡುಪಿ: ರೈತರು ಈ ದೇಶದ ಬೆನ್ನುಲೆಬು,ಅದರೆ ಇತ್ತೀಚೆಗೆ ರೈತರು ಸಂಕಷ್ಟಗಳಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು , ರೈತರಲ್ಲಿ ಆತ್ಮವಿಶ್ವಾಸ ಮಾಡಿಸಲು ರೈತ ಸಂಪರ್ಕ ಕಾರ್ಯಕ್ರಮಗಳನ್ನು ಜಿಲ್ಲೆಯಾದ್ಯಂತ ಏರ್ಪಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.

Raithasamparka_vinaykumarsorake_udupi 28-01-2006 10-05-48 Raithasamparka_vinaykumarsorake_udupi 28-01-2006 10-05-27

ಅವರು ಭಾನುವಾರ ಪೆರ್ಡೂರಿನಲ್ಲಿ ನಡೆದ ರೈತ ಸಂಪರ್ಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದೇಶದ ಸ್ವಾತಂತ್ರ್ಯ ನಂತರ ಸಹಕಾರ ಕ್ಷೇತ್ರದ ಬೆಳವಣಿಗೆಯಲ್ಲಿ ದೇಶದಲ್ಲಿ ಹೆಚ್ಚಿನ ಅಭಿವೃದ್ಧಿ ಸಾಧ್ಯವಾಗಿದೆ, ಆದ್ದರಿಂದ ಸರ್ಕಾರ ಮತ್ತು ಸಹಕಾರಿ ಕ್ಷೇತ್ರಗಳು ರೈತರ ಮನೆ ಬಾಗಿಲಿಗೆ ತೆರಳಿ, ವಿವಿಧ ಅಭಿವೃದ್ದಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಬೇಕು, ಜಿಲ್ಲೆಯಲ್ಲಿ ಈಗಾಗಲೇ ಕೃಷಿ ಅಭಿಯಾನ ನಡೆಸುವುದರ ಮೂಲಕ ರೈತರಲ್ಲಿ ಆತ್ಮ ವಿಶ್ವಾಸ ಮೂಡಿಸುವ ಕಾರ್ಯ ನಡೆಸಲಾಗಿದೆ ಆದರೆ ತಳಮಟ್ಟದಿಂದ ರೈತರಿಗೆ ನೆರವು ನೀಡಲು ಸಹಕಾರಿ ಸಂಘಗಳ ನೆರವು ಅಗತ್ಯ ಎಂದು ಸಚಿವರು ಹೇಳಿದರು.

Raithasamparka_vinaykumarsorake_udupi 28-01-2006 09-29-18 Raithasamparka_vinaykumarsorake_udupi 28-01-2006 10-27-59 Raithasamparka_vinaykumarsorake_udupi 28-01-2006 10-07-28

ರಾಜ್ಯ ಸರ್ಕಾರದಿಂದ ರೈತರಿಗೆ 3 ಲಕ್ಷ ರೂ ವರೆಗೆ ಬಡ್ಡಿ ರಹಿತ ಸಾಲ ಮತ್ತು 3 ರಿಂದ 10 ಲಕ್ಷಗಳ ವರೆಗೆ ಶೇ.3 ರ ಬಡ್ಡಿದರದಲ್ಲಿ ಸಾಲ ವಿತರಿಸಲಾಗುತ್ತಿದೆ, ಜಿಲ್ಲೆಯಲ್ಲಿ ಹೈನುಗಾರರಿಗೆ 42.75 ಕೋಟಿ ಕ್ಷೀರಭಾಗ್ಯ ಸಬ್ಸಿಡಿ ಮೊತ್ತವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ ಎಂದ ಸಚಿವರು ಈ ರೈತ ಸಂಪರ್ಕ ಕಾರ್ಯಕ್ರಮವನ್ನು ಇಡೀ ರಾಜ್ಯದಲ್ಲೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದು, ಎಲ್ಲಾ ಇಲಾಖೆಗಳು ಜಿಲ್ಲೆಯಾದ್ಯಂತ ನಡೆಯುವ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ರೈತರ ಸಮಸ್ಯೆಗಳನ್ನು ಅರ್ಥೈಸಿಕೊಂಡು ರೈತರಿಗೆ ನೆರವು ನೀಡಲಿವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶೂನ್ಯ ಬಡ್ಡಿದರದಲ್ಲಿ ಸಾಲ ಪಡೆದ ಫಲಾನುಭವಿಗಳಿಗೆ ಚೆಕ್ ವಿತರಣೆ, ಪಶುಪಾಲನಾ ಇಲಾಖೆವತಿಯಿಂದ ಹಸು ವಿತರಣೆ, ರಾಷ್ಟ್ರೀ ಕೃಷಿ ವಿಕಾಸ ಯೋಜನೆ ಫಲಾನುಭವಿಗಳಿಗೆ ಸಚಿವರು ಚೆಕ್ ಗಳನ್ನು ವಿತರಿಸಿದರು.

ರೈತರಿಗೆ ಮಾಹಿತಿ ನೀಡಲು ಕೃಷಿ, ಅರಣ್ಯ ತೋಟಗಾರಿಕೆ, ಸಣ್ಣ ನೀರಾವತಿ, ಕಂದಾಯ, ಸಹಕಜಾರ ಇಲಾಖೆ ಸೇರಿದಂತೆ ಹಲವು ಇಲಾಖೆಗಳ ಮಳಿಗೆಗಳನ್ನು ತೆರಿದಿದ್ದವು.

ದ.ಕ. ಜಿಲ್ಲಾ ಕೇಂದ್ರ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪೆರ್ಡೂರು ಗ್ರಾ.ಪಂ. ಅಧ್ಯಕ್ಷೆ ಶಾಂಭವಿ, ಜಿಲ್ಲಾ ಪಂ. ಸದಸ್ಯೆ ಗೋಪಿ ಕೆ.ನ್ಯಾಕ್,ತಾ.ಪಂ. ಸದಸ್ಯ ಪಕ್ಕಾಲು ರಾಮ ಕುಲಾಲ್, ನಾಗವೇಣಿ ಪುತ್ರನ್, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು, ಹಿರಿಯಡ್ಕ ರೈತ ಸೇವಾ ಸಹಕಾರಿ ಸಂಘದ ಸಧ್ಯಕ್ಷ ಬಿ.ಅಶೋಕ್ ಕುಮಾರ್ ಶೆಟ್ಟಿ, ಪೆರ್ಡೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಶಾಂತಾರಾಮ ಸೂಡ , ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂದಕ ಪ್ರವೀಣ್ ನಾಯಕ್ ಹಾಗೂ ವಿವಿಧ ಸಹಕಾರಿ ಸಂಘಗಳ ಅಧ್ಯಕ್ಷರು ಉಪಸ್ಥಿತರಿದ್ದರು.

ಬೆಳಪು ಸಹಕಾರಿ ಸಂಘದ ಅಧ್ಯಕ್ಷ ಡಾ.ದೇವಿ ಪ್ರಸಾದ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಡಿಸಿಸಿ ಬ್ಯಾಂಕ್ ನ ನಿರ್ದೇಶಕ ರಾಜೇಶ್ ರಾವ್ ಸ್ವಾಗತಿಸಿದರು.ಎಂ. ವಿಶ್ವನಾಥ ನಾಯರ್ ವಂದಿಸಿದರು. ಪ್ರಶಾಂತ ಹಾವಂಜೆ ನಿರೂಪಿಸಿದರು.


Spread the love