ಉಡುಪಿ: ಲಕ್ಷ್ಮೀಂದ್ರನಗರದಲ್ಲಿ ಕಾರಿಗೆ ಕೆಎಸ್ ಆರ್ ಟಿಸಿ ಬಸ್ ಡಿಕ್ಕಿ

Spread the love

ಉಡುಪಿ: ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸೊಂದು ಕಾರಿಗೆ ಡಿಕ್ಕಿ ಹೊಡೆದ ಘಟನೆ ಉಡುಪಿ ಮಣಿಪಾಲ ರಸ್ತೆಯ ಲಕ್ಷ್ಮೀಂದ್ರನಗರ ಬಳಿ ಸೋಮವಾರ ಬೆಳಿಗ್ಗೆ ಸಂಭವಿಸಿದೆ. ಘಟನೆಯ ಯಾವುದೇ ರೀತಿಯ ಪ್ರಾಣಹಾನಿ ಅಥವಾ ಗಾಯಗೊಂಡ ಘಟನೆ ನಡೆದಿಲ್ಲ.

IMG-20150608-WA0003 IMG-20150608-WA0004 IMG-20150608-WA0005 IMG-20150608-WA0006 IMG-20150608-WA0007 IMG-20150608-WA0008 IMG-20150608-WA0009 IMG-20150608-WA0010 IMG-20150608-WA0011

ಬೆಂಗಳೂರಿನಿಂದ ಕುಂದಾಪುರಕ್ಕೆ ಸಾಗುತ್ತಿದ್ದ ಕೆಎಸ್ಆರ್ ಟಿಸಿ ಅಂಬಾರಿ ಬಸ್ ಮಣಿಪಾಲದಲ್ಲಿ ಪ್ರಯಾಣಿಕರನ್ನು ಇಳಿಸಿ ಉಡುಪಿ ಕಡೆ ಬರುತ್ತಿದ್ದ ವೇಳೆ ಸ್ವಿಫ್ಟ್ ಕಾರೊಂದು ಲಕ್ಷ್ಮೀಂದ್ರನಗರ ಬಳಿ ಎಡಕ್ಕೆ ತಿರುಗುತ್ತಿದ್ದು ಇದನ್ನು ಗಮನಿಸದ ಬಸ್ ಚಾಲಕ ಕಾರಿಗೆ ಡಿಕ್ಕಿ ಹೊಡೆದ್ದಿದ್ದ ಎನ್ನಲಾಗಿದೆ. ಇದರಿಂದ ಯಾವುದೇ ರೀತಿಯ ಸಾವು ನೋವು ವರದಿಯಾಗಿಲ್ಲ.

ಸ್ಥಳಕ್ಕೆ ಸಂಚಾರಿ ಪೋಲಿಸರು ಆಗಮಿಸಿ ಪರೀಶೀಲನೆ ನಡೆಸಿದ್ದಾರೆ.


Spread the love