ಎಸ್ಎಸ್ಎಪ್ ತೊಕ್ಕೋಟು ಸೆಕ್ಟರ್ ರಿಲೀಪ್ ಸರ್ವಿಸ್ ವತಿಯಿಂದ ರೇಷನ್ ವಿತರಣೆ

Spread the love

ಎಸ್ಎಸ್ಎಪ್ ತೊಕ್ಕೋಟು ಸೆಕ್ಟರ್ ರಿಲೀಪ್ ಸರ್ವಿಸ್ ವತಿಯಿಂದ ರೇಷನ್ ವಿತರಣೆ

ಮಂಗಳೂರು: ಕರ್ನಾಟಕ ರಾಜ್ಯ ಎಸ್ಎಸ್ಎಪ್ ವತಿಯಿಂದ ಆಝಾದಿ ಸಪ್ತಾಹದ ಅಂಗವಾಗಿ ಅಗೊಸ್ಟು 13 ಶನಿವಾರ ಮೈಸೂರ್ ನಲ್ಲಿ ಹಮ್ಮಿ ಕೊಂಡ ಆಝಾಧಿ ರಾಲಿಯ ಪ್ರಚಾರ ಪ್ರಯುಕ್ತ ಬಡ ಕುಟುಂಬಗಳಿಗೆ ರೇಷನ್ ವಿತರಣೆ ಕಾರ್ಯಕ್ರಮವು ಕುಂಪಲ ವೈಟ್ ಹೌಸ್ ನಲ್ಲಿ ಇತ್ತೀಚಿಗೆ ಜರಗಿತ್ತು.

ssf-free-ration-distribution

ಎಸ್ಎಸ್ಎಪ್ ಉಳ್ಳಾಲ ಡಿವಿಷನ್ ಉಪಾಧ್ಯಕ್ಷರಾದ ಮುನೀರ್ ಅಹ್ಮದ್ ಖಾಮಿಲ್ ಸಖಾಪಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಅಧ್ಯಕ್ಷತೆಯನ್ನು ಎಸ್ಎಸ್ಎಪ್ ತೊಕ್ಕೋಟು ಸೆಕ್ಟರ್ ರಿಲೀಪ್ ಸರ್ವಿಸ್ ಗೌರವಾದ್ಯಕ್ಷರಾದ ಹಾಜಿ ಇಕ್ಬಾಲ್ ಕುಂಪಲ ವಹಿಸಿದ್ದರು ಎಸ್ಎಸ್ಎಪ್ ತೊಕ್ಕೋಟು ಸೆಕ್ಟರ್ ರಿಲೀಫ್ ಸರ್ವಿಸ್ ಸಂಚಾಲಕರಾದ ಉಮರಬ್ಬ ಕೈರಂಗಳ ರೇಷನ್ ವಿತರಿಸಿದರು ಸಭೆಯಲ್ಲಿ ಹನೀಪ್ ಖಿಲಿರಿಯಾ ಉಪಸ್ತಿತಿದ್ದರು ಎಸ್ಎಸ್ಎಪ್ ದ ಕ ಜಿಲ್ಲಾ ಕೋಶಾದಿಕಾರಿ ಅಲ್ತಾಪ್ ಕುಂಪಲ ಸ್ವಾಗತಿಸಿ ಸೆಕ್ಟರ್ ಕೋಶಾದಿಕಾರಿ ಶಮೀರ್ ಸೇವಂತಿಗುಡ್ಡೆ ವಂದಿಸಿದರು


Spread the love