ಐವರ್ನಾಡು ದರೋಡೆ, ಐವರು ಆರೋಪಿಗಳನ ಬಂಧನ

Spread the love

ಐವರ್ನಾಡು ದರೋಡೆ, ಐವರು ಆರೋಪಿಗಳನ ಬಂಧನ

ಮಂಗಳೂರು: ಬೆಳ್ಳಾರೆಯ ಐರ್ವನಾಡು ಬಳಿ ನಡೆದ ದರೋಡೆ ಪ್ರಕರಣದ ಐವರು ಆರೋಪಿಗಳನ್ನು ಬೆಳ್ಳಾರೆ ಪೋಲಿಸರು ಬಂಧಿಸಿದ್ದಾರೆ.

ಬಂಧಿತರನ್ನು ಅವಿನಾಶ್ ಜಗನಾಥ ಮಾರ್ಕೆ, ಅಬ್ದುಲ್ ಕರೀಮ್, ಮೊಹಮ್ಮದ್ ಹನೀಫ್, ತಾಹಿರ ಹುಸೇನ್, ಚರಣ್ ಸಿಂಗ್ ಎಂದು ಗುರುತಿಸಲಾಗಿದೆ.
ಜನವರಿ 1 ರಂದು ಅಬ್ದುಲ್ ಖಾದರ್ ಎಂಬವರ ಕಾರು ಅಡ್ಡಗಟ್ಟಿ ನಡೆದಿದ್ದ ದರೋಡೆ ಪ್ರಕರಣದಲ್ಲಿ ಐದು ಲಕ್ಷ ರೂ ನಗದು, ಮೊಬೈಲ್ ದೋಚಿದ್ದರು ಎನ್ನಲಾಗಿದೆ.
ಆರೋಪಿಗಳಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.


Spread the love