ಕಂಕನಾಡಿ ಗರೋಡಿ ಬ್ರಹ್ಮಕಲಶೋತ್ಸವದ ಭಿತ್ತಿಪತ್ರ ಬಿಡುಗಡೆ

Spread the love

ಕಂಕನಾಡಿ ಗರೋಡಿ ಬ್ರಹ್ಮಕಲಶೋತ್ಸವದ ಭಿತ್ತಿಪತ್ರ ಬಿಡುಗಡೆ

ಮಂಗಳೂರು: ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಕ್ಷೇತ್ರ ಕಂಕನಾಡಿಯ ಬ್ರಹ್ಮಕಲಶೋತ್ಸವವು ಇದೇ ತಿಂಗಳ 25 ರಿಂದ 28 ರವರೆಗೆ ಹಾಗೂ ವರ್ಷಾವಧಿ ಉತ್ಸವವು ಜನವರಿ 1 ರಿಂದ 5ರವರೆಗೆ ನಡೆಯಲಿದೆ.

ಆ ಪ್ರಯುಕ್ತ ಗರೋಡಿ ಕ್ಷೇತ್ರದ ಅಧ್ಯಕ್ಷರಾದ ಚಿತ್ತರಂಜನ್ ಅವರ ಉಪಸ್ಥಿತಿಯಲ್ಲಿ ಮಂಗಳೂರು ನಗರ ದಕ್ಷಿಣ ಮಂಡಲದ ಬಿಜೆಪಿ ಅಧ್ಯಕ್ಷ ಡಿ.ವೇದವ್ಯಾಸ್ ಕಾಮತ್ ಅವರು ಭಿತ್ತಿಪತ್ರಗಳನ್ನು ಬಿಡುಗಡೆ ಮಾಡಿದರು.

ಕ್ಷೇತ್ರದಲ್ಲಿ ಸಂಕ್ರಾಂತಿ ಪೂಜೆ ನೆರವೇರಿದ ಬಳಿಕ ಪ್ರಸಾದ ವಿತರಣೆ ನಡೆಯಿತು.

ಈ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿಯ ಮುಖಂಡರಾದ ಸಂಜಯ್ ಪ್ರಭು, ವಸಂತ ಜೆ. ಪೂಜಾರಿ, ಭಾಸ್ಕರ ಚಂದ್ರ ಶೆಟ್ಟಿ, ಪ್ರಭಾ ಮಾಲಿನಿ, ದೇವೋಜಿ ರಾವ್, ಸಂದೀಪ್ ಗರೋಡಿ, ಜಗದೀಶ್ ಗರೋಡಿ, ಶ್ರೀಕಾಂತ್ ರಾವ್, ಅಭಿಷೇಕ್ ಅಮೀನ್ ಬಿಕರ್ನಕಟ್ಟೆ, ಶಶಾಂಕ್ ಆಚಾರ್, ಶಿವಪ್ರಸಾದ್ ಬೋಳಾರ್ ಮತ್ತಿತರು ಉಪಸ್ಥಿತರಿದ್ದರು.

 


Spread the love