ಚಲನ ಚಿತ್ರ ನಿರ್ಮಾಪಕ ದೇವಿ ಪ್ರಸಾದ್ ಪುತ್ರ ಆತ್ಮಹತ್ಯೆ

Spread the love

ಚಲನ ಚಿತ್ರ ನಿರ್ಮಾಪಕ ದೇವಿ ಪ್ರಸಾದ್ ಪುತ್ರ ಆತ್ಮಹತ್ಯೆ

ಸುಳ್ಯ: ಸಂಪಾಜೆ ಗ್ರಾಮದ ಚಲನ ಚಿತ್ರ ನಿರ್ಮಾಪಕ ಮತ್ತು ಸಾಹಿತಿ ದೇವಿ ಪ್ರಸಾದ್ ಅವರ ಪುತ್ರ ವಕೀಲ ದೇವಿಚರಣ್ (39) ಶನಿವಾರ ತಡರಾತ್ರಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು  ವರದಿಯಾಗಿದೆ.

ಈ ಸಂದರ್ಭ ಅವರು ಮನೆಯಲ್ಲಿ ಒಬ್ಬಂಟಿಯಾಗಿದ್ದರು ಎಂದು ತಿಳಿದು ಬಂದಿದೆ. ಮೃತರು ಪತ್ನಿ ಹಾಗು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಮಡಿಕೇರಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.


Spread the love