ಜೀವನ್ ಕೆ. ಶೆಟ್ಟಿಯವರಿಗೆ ನ್ಯಾಷನಲ್ ಅವಾರ್ಡ್ ಪ್ರದಾನ

Spread the love

ಜೀವನ್ ಕೆ. ಶೆಟ್ಟಿಯವರಿಗೆ ನ್ಯಾಷನಲ್ ಅವಾರ್ಡ್ ಪ್ರದಾನ

ಬೆಂಗಳೂರು: ಬೆಂಗಳೂರಿನ ಜಾಗತಿಕ, ಆರ್ಥಿಕ ಹಾಗು ಸಾಮಾಜಿಕ ಪರಿವರ್ತನಾ ಸಂಸ್ಥೆಯು ನೀಡುವ ಪ್ರತಿಷ್ಠಿತ ಸರ್. ಎಂ.ವಿಶ್ವೇಶ್ವರಯ್ಯ ಬೆಸ್ಟ್ ಇಂಜಿನಿಯರಿಂಗ್ ನ್ಯಾಷನಲ್ ಅವಾರ್ಡ್‍ನ್ನು ಮೂಲ್ಕಿಯ ಶಾರದಾ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಹಾಗು 2016ರ ರಾಷ್ಟ್ರೀಯ ಗೌರವ ಅವಾರ್ಡ್ ಪುರಸ್ಕøತ ಇಂಜಿನಿಯರ್ ಜೀವನ್ ಕೆ. ಶೆಟ್ಟಿಯವರಿಗೆ ನೀಡಿ ಗೌರವಿಸಿತು.

ಬೆಂಗಳೂರಿನ ಎ.ಡಿ.ಎ ರಂಗಮಂದಿರದಲ್ಲಿ ಶನಿವಾರದಂದು ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೇಂದ್ರ ಸರಕಾರದ ಮಾಜಿ ಯೋಜನಾ ಮಂತ್ರಿಗಳಾದ ಎಂ.ವಿ ರಾಜಶೇಖರನ್, ಚಲನಚಿತ್ರ ನಿರ್ಮಾಪಕ, ನಿರ್ದೇಶಕ ಎಂ.ಎನ್.ಸುರೇಶ್, ಕನ್ನಡ ಚಲನಚಿತ್ರ ನಿರ್ಮಾಪಕ ಆರ್ಯ, ಸಂಸ್ಥೆಯ ಅಧ್ಯಕ್ಷರಾದ ಡಾ| ಶಿವಪ್ಪ ಉಪಸ್ಥಿತರಿದ್ದರು.


Spread the love