ದೀಪಕ್ ರಾವ್ ಮನೆಗೆ ಶಾ ಭೇಟಿ; ಬಿಜೆಪಿಯಿಂದ ರೂ.10 ಲಕ್ಷ ನೆರವು ಹಸ್ತಾಂತರ

Spread the love

ದೀಪಕ್ ರಾವ್ ಮನೆಗೆ ಶಾ ಭೇಟಿ; ಬಿಜೆಪಿಯಿಂದ ರೂ.10 ಲಕ್ಷ ನೆರವು ಹಸ್ತಾಂತರ

ಸುರತ್ಕಲ್ : ಇತ್ತೀಚೆಗೆ ಸುರತ್ಕಲ್ ಕಾಟಿಪಳ್ಳದಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೊಳಗಾದ ದೀಪಕ್ ರಾವ್ ಮನೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಮಂಗಳವಾರ ಭೇಟಿ ನೀಡಿದರು.

ಈ ವೇಳೆ ಕುಟುಂಬಿಕರಿಗೆ ಸಾಂತ್ವಾನ ಹೇಳಿದ ಅಮಿತ್ ಶಾ ಅವರು ಭಾರತೀಯ ಜನತಾ ಪಕ್ಷದ ವತಿಯಿಂದ ರೂ 10 ಲಕ್ಷ ನೆರವನ್ನು ಕುಟುಂಬಿಕರಿಗೆ ಹಸ್ತಾಂತರಿಸಿದರು.

ಈ ವೇಳೆ ದೀಪಕ್ ರಾವ್ ಅವರ ತಾಯಿ ಪ್ರೇಮಲತಾ, ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಸಚಿವ ಕೃಷ್ಣ ಜೆ ಪಾಲೇಮಾರ್ ಹಾಗೂ ಇತರರು ಉಪಸ್ಥಿತರಿದ್ದರು.


Spread the love