ಧರಂಸಿಂಗ್ ಅವರ ನಿಧನಕ್ಕೆ ಸಚಿವ ಪ್ರಮೋದ್ ಮಧ್ವರಾಜ್ ಸಂತಾಪ

Spread the love

ಧರಂಸಿಂಗ್ ಅವರ ನಿಧನಕ್ಕೆ ಸಚಿವ ಪ್ರಮೋದ್ ಮಧ್ವರಾಜ್ ಸಂತಾಪ

ಉಡುಪಿ:  ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಎನ್ ಧರಂಸಿಂಗ್ ಅವರ ನಿಧನಕ್ಕೆ ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೊದ್ ಮಧ್ವರಾಜ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಕುಂದಾಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಧರಂ ಸಿಂಗ್ ಧರ್ಮರಾಯ ಇದ್ದಂತೆ ಪಾಂಡವರಲ್ಲಿ ಧರ್ಮರಾಯನಂತ ಸ್ವಭಾವದವರು ಸೌಮ್ಯ ಸ್ವಭಾವದವರು-ಜನರ ಬಗ್ಗೆ ಪ್ರೀತಿ ವಿಶ್ವಾಸವಿದ್ದವರು. ನನ್ನ ತಾಯಿ ಮನೋರಮಾ ಮಧ್ವರಾಜ್ ಜೊತೆಯಾಗಿ ಕೆಲಸ ಮಾಡಿದವರು. ನಾನು ಪ್ರಮಾಣವಚನ ಸ್ವೀಕಾರ ಮುಂಚೆ ಆಶೀರ್ವಾದ ಪಡೆದಿದ್ದೆ ಅವರ ಮನೆಯಲ್ಲೇ ಉಪಾಹಾರ ಸ್ವೀಕರಿಸಿದ್ದೆ. ಧರಂ ಸಿಂಗ್ ಜನನಾಯಕರಾಗಿ ರಾಜ್ಯಕ್ಕೆ ಕೊಡುಗೆ ಸ್ಮರಿಸುವಂತದ್ದು ಎಂದು ಸಚಿವರು ಹೇಳಿದ್ದಾರೆ.

 ಎನ್ ಧರಂಸಿಂಗ್ ಅವರ ಆತ್ಮಕ್ಕೆ ಭಗವಂತನು ಶಾಂತಿಯನ್ನು ನೀಡಲಿ ಹಾಗೂ ಕುಟುಂಬದವರಿಗೆ ದು:ಖವನ್ನು ಭರಿಸುವ ಶಕ್ತಿ ನೀಡಲಿ ಎಂದು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

 


Spread the love