ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಕಾರು – ಪತ್ರಕರ್ತ ಸೇರಿ ಇಬ್ಬರ ಸಾವು

Spread the love

ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಕಾರು – ಪತ್ರಕರ್ತ ಸೇರಿ ಇಬ್ಬರ ಸಾವು

ಮೈಸೂರು: ಕಾರಿನ ಮೇಲೆ ಚಾಲಕ ನಿಯಂತ್ರಣ ಕಳೆದುಕೊಂಡ ಪರಿಣಾಮ ಕಾರು ಮರಕ್ಕೆ ಡಿಕ್ಕಿ ಹೊಡೆದು ಪತ್ರಿಕೆಯೊಂದರ ಉಪಸಂಪಾದಕ ಸೇರಿದಂತೆ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಭಾನುವಾರ ಮೈಸೂರಿನ ಟಿ.ನರಸೀಪುರ ತಾಲೂಕಿನ ತಲಕಾಡು ಬಳಿ ನಡೆದಿದೆ.

ಮೃತರನ್ನು ಮೈಸೂರಿನ ಅರವಿಂದ ನಗರ ನಿವಾಸಿ ವಿಜಯವಾಣಿ ಕನ್ನಡ ದಿನಪತ್ರಿಕೆಯ ಮೈಸೂರು ಆವೃತ್ತಿಯ ಹಿರಿಯ ಉಪಸಂಪಾದಕ ಎಂ. ಜಿ. ರಾಜೇಶ್ (40) ಮತ್ತು ಅವರ ಅತ್ತಿಗೆ ಮಹಿಮಾ (37) ಎಂದು ಗುರುತಿಸಲಾಗಿದೆ.

ಕಾರಿನಲ್ಲಿದ್ದ ಭಾಗ್ಯಲಕ್ಷ್ಮೀ (38), ಭೂಮಿಕ (10), ಹರ್ಷವರ್ಧನ್ (18), ಜಗನ್ಮಯ (12) ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

ರಾಜೇಶ್ ಕುಟುಂಬ ಮುಡುಕುತೊರೆಯಲ್ಲಿ ಸಂಬಂಧಿಕರೊಬ್ಬರ ಕಾರ್ಯಕ್ರಮಕ್ಕೆ ಮೈಸೂರಿನಿಂದ ಆಗಮಿಸಿದ್ದು, ಮಕ್ಕಳಿಗೆ ತಲಕಾಡು ನಿಸರ್ಗಧಾಮ ತೋರಿಸಲು ತಲಕಾಡಿಗೆ ಬರುವಾಗಿ ಗೊಂದಲಕ್ಕೀಡಾಗಿ ಕಾರನ್ನು ಬೆಳಕವಾಡಿ ರಸ್ತೆಗೆ ತಿರುಗಿಸಿಕೊಂಡು ಹೋಗುವಾಗ ತಲಕಾಡು ಬಳಿಯ ಅರುಂಧತಿ ನಗರದ ಬಳಿಯಲ್ಲಿ ಆಕಸ್ಮಿಕ ನಿಯಂತ್ರಣ ಕಳೆದುಕೊಂಡ ಕಾರು ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿದೆ.

ಪರಿಣಾಮ ಕಾರಿನ ಮುಂಬಾಗದಲ್ಲಿ ಕುಳಿತಿದ್ದ ರಾಜೇಶ್ ಹಾಗೂ ಚಾಲನೆ ಮಾಡುತ್ತಿದ್ದ ಅತ್ತಿಗೆ ಮಹಿಮಾ ತಲೆಗೆ ತೀವ್ರ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.


Spread the love