ನಿವೃತ್ತ ಪೋಲೀಸ್ ಅಧೀಕ್ಷಕ ಎಂ. ಗಣೇಶ್ ನಿಧನ

Spread the love

ನಿವೃತ್ತ ಪೋಲೀಸ್ ಅಧೀಕ್ಷಕ ಎಂ. ಗಣೇಶ್ ನಿಧನ

ಮಂಗಳೂರು : ನಗರದ ನಿವಾಸಿ ಹಾಗೂ ನಿವೃತ್ತ ಪೋಲೀಸ್ ಅಧೀಕ್ಷಕ ಎಂ. ಗಣೇಶ್ (67) ರವರು ತಮ್ಮ ಕದ್ರಿ ಕಂಬ್ಳ ಕಾಸ್ಮೋಸ್ ರಸ್ತೆಯ ಸ್ವಗೃಹದಲ್ಲಿ ತೀವ್ರ ಹೃದಯಘಾತದಿಂದ ಇಂದು ನಿಧನರಾದರು. ರಾಜ್ಯ ಪೋಲೀಸ್ ಇಲಾಖೆಯಲ್ಲಿ 35 ವರ್ಷ ದೀರ್ಘ ಸೇವಾವಧಿಯಲ್ಲಿ ಸೋಮವಾರಪೇಟೆ, ಬೆಂಗಳೂರು, ಮೈಸೂರು, ಮಂಗಳೂರು ನಗರಗಳಲ್ಲಿ ಪ್ರಾಮಾಣಿಕ ಕಾರ್ಯದಕ್ಷತೆ, ಕರ್ತವ್ಯ ನಿಷ್ಠೆಯಿಂದ ಸೇವೆ ಸಲ್ಲಿಸಿ ಸಾರ್ವಜನಿಕ ಕ್ಷೇತ್ರದಲ್ಲಿ ಜನಪ್ರಿಯರಾಗಿ ಜನಮನ್ನಣೆ ಗಳಿಸಿದ್ದರು ಮತ್ತು ಸರಳ ಸಜ್ಜನಿಕೆ, ಪ್ರೀತಿ ವಿಶ್ವಾಸದ ವ್ಯಕ್ತಿತ್ವ ಹೊಂದಿದ್ದರು. ಅವರ ವಿಶಿಷ್ಟ ಅನುಪಮ ಸೇವೆಯನ್ನು ಪರಿಗಣಿಸಿರಾಜ್ಯ ಮುಖ್ಯಮಂತ್ರಿಯವರ ವಿಶೇಷ ಪೋಲೀಸ್ ಪ್ರಶಸ್ತಿಗೆ ಪುರಸ್ಕøತರಾಗಿದ್ದರು. ಅವರು ಪತ್ನಿ, ಪುತ್ರ, ಪುತ್ರಿ ಮತ್ತು ಅಪಾರ ಬಂಧು ಬಳಗ, ಅಭಿಮಾನಿಗಳನ್ನು ಆಗಲಿದ್ದಾರೆ.

ನಗರದ ಅಪಾರ ಗಣ್ಯ ವ್ಯಕ್ತಿಗಳು, ಬಂಧುಗಳು, ಅಭಿಮಾನಿಗಳು ಆಗಮಿಸಿ ಮೃತರ ಅಂತಿಮ ದರ್ಶನ ಪಡೆದು ಶೋಕ ಸಂತಾಪ ವ್ಯಕ್ತಪಡಿಸಿದರು.

ನಿವೃತ್ತಿಯ ಬಳಿಕ ಸಮಾಜ ಸೇವೆಯ ಅಂಗವಾಗಿ ನಗರದ ದೇವಾಡಿಗರ ಸಂಘದ (ಉಪಾಧ್ಯಕ್ಷ), ವಿಶ್ವವಿದ್ಯಾನಿಲಯ ಸರ್ಕಾರಿ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ (ಉಪಾಧ್ಯಕ್ಷ) ಹಾಗೂ ಬಿ.ಇ.ಎಂ. ಪ್ರೌಢಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ನಿಸ್ವಾರ್ಥ ಸೇವೆ ಸಲ್ಲಿಸಿ, ಸಂಸ್ಥೆಯ ಅಭಿವೃದ್ಧಿಗೆ ಶ್ರಮಿಸಿದ್ದರು.

ಮೃತರ ಅಂತಕ್ರಿಯೆಯು ತಮ್ಮ ಸ್ವಗೃಹದಿಂದ ಶನಿವಾರ ತಾ.24.02.2018 ರಂದು 11.30ಕ್ಕೆ ಜರಗಲಿರುವುದು ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.


Spread the love