ಪಠ್ಯಶಿಕ್ಷಣದಲ್ಲಿ ಕಾನೂನು ಅಭ್ಯಾಸವನ್ನು ಅಳವಡಿಸುವಂತಾಗಲಿ: ದಯಾನಾಯಾಕ್

Spread the love

ಪಠ್ಯಶಿಕ್ಷಣದಲ್ಲಿ ಕಾನೂನು ಅಭ್ಯಾಸವನ್ನು ಅಳವಡಿಸುವಂತಾಗಲಿ: ಎನ್‍ಕೌಂಟರ್ ಸ್ಪೆಶಲಿಸ್ಟ್ ದಯಾನಾಯಾಕ್

ಮಿಜಾರು: `ಅತಿ ಹೆಚ್ಚಿನ ಶ್ರಮವಹಿಸಿ ಮುತುವರ್ಜಿಯಿಂದ ಕೆಲಸ ಮಾಡುವ ಏಕೈಕ ಇಲಾಖೆಯೆಂದರೆ ಅದು ಭಾರತೀಯ  ಪೊಲೀಸ್ ಇಲಾಖೆ. ಆದರೆ ನಮ್ಮ ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ ಇರುವ ಹಲವಾರು ಕಾನೂನುಗಳು ಬ್ರಿಟಿಷರ ಕಾಲದ್ದಾಗಿವೆ. ಈ ಕಾನೂನುಗಳಿಗೆ ತಕ್ಕ ತಿದ್ದುಪಡಿಯನ್ನು ಮಾಡುವ ಅವಶ್ಯಕತೆ ಇದೆ’ ಎಂದು ಎನ್‍ಕೌಂಟರ್ ಸ್ಪೆಶಲಿಸ್ಟ್ ಪಿಎಸ್‍ಐ ದಯಾನಾಯಕ್ ಹೇಳಿದರು.

image002alvas-dayanayak-20160906-002

ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ 2016-17 ನೇ ಸಾಲಿನ `ರೋಸ್ಟ್ರಮ್’-ಸ್ಪೀಕರ್ಸ್ ಕ್ಲಬ್‍ನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅಪರಾಧ, ಯುವಜನತೆ ಹಾಗೂ ಸಮಾಜ ಎಂಬ ವಿಷಯದ ಕುರಿತಾಗಿ ಬೆಳಕು ಚೆಲ್ಲಿದ ದಯಾನಾಯಕ್ ತಮ್ಮ ವೃತ್ತಿ ಜೀವನದ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. `ಇಂದಿನ ವಿದ್ಯಾರ್ಥಿಗಳು ಕಾನೂನಿನ ಬಗ್ಗೆ ಅರಿಯುವುದು ಅತಿ ಅವಶ್ಯ. ಕಾನೂನುಗಳನ್ನು ಅರಿತು ಅದರಂತೆ ನಡೆದಾಗ ಮಾತ್ರ ಅಪರಾಧಗಳನ್ನು ತಡೆಗಟ್ಟಲು ಸಾಧ್ಯ. ಜನತೆ ಕಾನೂನನ್ನು ಅರಿಯುವುದರಿಂದ ಪೊಲೀಸ್ ಇಲಾಖೆಗೂ ಕೂಡ ತುಂಬಾ ಸಹಾಯವಾಗುತ್ತದೆ. ಈ ನಿಟ್ಟಿನಲ್ಲಿ ಪಠ್ಯಶಿಕ್ಷಣದಲ್ಲಿ ಕಾನೂನು ಅಭ್ಯಾಸವನ್ನು ಅಳವಡಿಸುವುದು ಸೂಕ್ತ’ ಎಂದು ಅಭಿಪ್ರಾಯ ಪಟ್ಟರು.

image005alvas-dayanayak-20160906-005

ಒಂದೇ ರೀತಿಯ ಶಿಕ್ಷಣವನ್ನು ಪಡೆದರೂ ವಿದ್ಯಾರ್ಥಿಗಳಲ್ಲಿ ಹಲವಾರು ವ್ಯತ್ಯಾಸಗಳಿರುತ್ತವೆ. ಕೆಲವರು ಒಳ್ಳೆಯ ಕಾರ್ಯಗಳನ್ನು ಮಾಡುತ್ತಾರೆ; ಕೆಲವರು ತಪ್ಪುಗಳನ್ನೆಸಗುತ್ತಾ ಸಮಾಜಘಾತುಕರಾಗಿ ಬದಲಾಗುತ್ತಾರೆ. ಅವರು ಕೆಲಸ ಮಾಡುವ ರೀತಿ, ಯೋಚನಾ ವಿಧಾನ ಕೂಡ ಇಲ್ಲಿ ಮುಖ್ಯವಾಗುತ್ತದೆ. ಮಾಡುವ ಕೆಲಸ ಒಳ್ಳೆಯದಿರಲಿ ಅಥವಾ ಕೆಟ್ಟದಿರಲಿ. ಯಾವುದೇ ಕೆಲಸ ಮಾಡಲು ಸಾಮಥ್ರ್ಯ ಇರಲೇಬೇಕು. ಆದರೆ ಇರುವ ಸಾಮಥ್ರ್ಯವನ್ನು ಸರಿಯಾಗಿ ಬಳಸಿಕೊಳ್ಳುವುದು ಕೂಡ ಅಷ್ಟೇ ಮುಖ್ಯ. ಎಲ್ಲಾ ಕ್ಷೇತ್ರಗಳಲ್ಲಿ ಪರಿಣತಿ ಪಡೆಯುವುದು ಸಾಧ್ಯವಿಲ್ಲ. ಯಾವುದಾದರೂ ಒಂದು ಕ್ಷೇತ್ರದಲ್ಲಿ ನೈಪುಣ್ಯತೆ ಪಡೆದು ಅದರಲ್ಲಿ ಅತ್ಯುತ್ತಮವಾದುದನ್ನು ಸಾಧಿಸಬಹುದು ಎಂದರು.

image003alvas-dayanayak-20160906-003

ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ, ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಪೀಟರ್ ಫೆರ್ನಾಂಡಿಸ್, ರೋಸ್ಟ್ರಮ್ ಕ್ಲಬ್‍ನ ಅಧ್ಯಕ್ಷೆ ರಕ್ಷಾ ಸತೀಶ್, ಕಾರ್ಯದರ್ಶಿ ಮುರಳಿಕೃಷ್ಣ ಆಚಾರ್ಯ ಉಪಸ್ಥಿತರಿದ್ದರು.

image006alvas-dayanayak-20160906-006

`ನನ್ನ ತಪ್ಪಿಗೆ ದೇವರು ಶಿಕ್ಷೆ ಕೊಡುತ್ತಾನೆ’

ಕೆಲಸ ಮಾಡುವಾಗ ತುಂಬಾ ಜಾಗೃತೆ ವಹಿಸಬೇಕು. ಅಜಾಗರೂಕತೆಯಿಂದಾಗುವ ಚಿಕ್ಕ ಪ್ರಮಾದ ಕೂಡ ಮುಂದೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಬಹುದು. ನಮ್ಮ ಕಾರ್ಯಕ್ಷೇತ್ರದ ಕುರಿತು ಆಳವಾದ ಜ್ಞಾನ, ಅರಿವು ಇದ್ದಾಗ ಇಂತಹ ಪ್ರಮಾದಗಳುಂಟಾಗುವುದನ್ನು ತಪ್ಪಿಸಬಹುದು. ನಾವು ಏನು ಕೆಲಸ ಮಾಡುತ್ತದ್ದೇವೆಂಬುದರ ಸ್ಪಷ್ಟ ಅರಿವು ನಮಗಿರಬೇಕು ಎಂದರು.

ಸಂವಾದ

image004alvas-dayanayak-20160906-004

ಕಾರ್ಯಕ್ರಮದ ಕೊನೆಗೆ ದಯಾನಾಯಕ್ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಪೊಲೀಸ್ ಇಲಾಖೆ, ಇಲಾಖೆಯ ಕಾರ್ಯಾಚರಣೆಗಳು, ಅವ್ಯವಸ್ಥೆಗಳು ಹಾಗೂ ಪೊಲೀಸ್ ಇಲಾಖೆಯಲ್ಲಿ ರಾಜಕೀಯ ಹಸ್ತಕ್ಷೇಪ ಕುರಿತಾದ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಅವರು ಉತ್ತರ ನೀಡಿದರು. ಸಂವಾದದ ಸಮಯದಲ್ಲಿ ವಿದ್ಯಾರ್ಥಿ ಶಕ್ತಿ ಬೇರೆಲ್ಲಾ ಶಕ್ತಿಗಳಿಗಿಂತಲೂ ಅನುಪಮವಾದುದು ಎಂದ ಅವರು ದೇಶಕ್ಕಾಗಿ ಒಳ್ಳೆಯದನ್ನು ಮಾಡುವ ಯೋಜನೆಗಳನ್ನು ವಿದ್ಯಾರ್ಥಿಗಳು ರೂಪಿಸಬೇಕೆಂದರು.


Spread the love