ಪಿಲಿಕುಳವನ್ನು ಆಧುನಿಕ ಸಂಸ್ಕೃತಿ ಗ್ರಾಮವಾಗಿ ಪರಿವರ್ತನೆ: ಜೆ.ಆರ್.ಲೋಬೊ

Spread the love

ಪಿಲಿಕುಳವನ್ನು ಆಧುನಿಕ ಸಂಸ್ಕೃತಿ ಗ್ರಾಮವಾಗಿ ಪರಿವರ್ತನೆ: ಜೆ.ಆರ್.ಲೋಬೊ

ಮಂಗಳೂರು: ಪಿಲಿಕುಳವನ್ನು ಆಧುನಿಕ ಸಂಸ್ಕೃತಿ ಗ್ರಾಮವಾಗಿ ಮಾಡುವ ಪ್ರಯತ್ನದ ಫಲವಾಗಿ ಕೆರೆಗುದ್ದಲಿ ಪೂಜೆಯನ್ನು ಮಾಡುತ್ತಿರುವುದಾಗಿ ಶಾಸಕ ಜೆ.ಆರ್.ಲೋಬೊ ಅವರು ತಿಳಿಸಿದರು.

ಅವರು ನಿನ್ನೆ ಪಿಲಿಕುಳದಲ್ಲಿ ಕೆರೆ ಗುದ್ದಲಿ ಪೂಜೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು. ಈ ಕೆರೆ ಗ್ರಾಮೀಣ ಭಾಗದ ಹಿಂದಿನ ವಾತಾವರಣವನ್ನು ತೋರಿಸುತ್ತಿದೆ. ದನ ಕರುಗಳಿಗೆ ನೀರು, ಬಟ್ಟೆ ಒಗೆಯುವುದಕೇ ಹೀಗೆ ಬದುಕಿನ ಎಲ್ಲಾ ಆವಶ್ಯಕತೆಗಳಿಗೆ ಈ ಕೆರೆ ಸಾಕ್ಷಿಯಾಗುತ್ತಿದೆ ಎಂದರು.

pikula

ಈ ಕೆರೆಯನ್ನು ಮತ್ತೆ ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ನಮ್ಮ ಕೆರೆಗಳು ಹೇಗಿದ್ದವು ಮತ್ತು ಹೇಗೆ ಪರ್ಯಾವಸನ ಕಂಡವು ಎನ್ನುವುದು ಕೂಡಾ ಇಲ್ಲಿ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಲೋಬೊ ತಿಳಿಸಿದರು.

ಇದನ್ನು ಮೊದಲು ಈ ಕೆರೆಯನ್ನು ಪುನರುಜ್ಜೀವನಗೊಳಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಕೆಲಸಗಳನ್ನು ಕೈಗೊಂಡು ಎಲ್ಲರಿಗೂ ಪ್ರಯೋಜನವಾಗುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೇವೆ ಎಂದರು.

ಈ ಕಾಮಗಾರಿಯನ್ನು 4-5 ತಿಂಗಳಲ್ಲಿ ನೀರಾವರಿ ಇಲಾಖೆ ಪೂರ್ಣಗೊಳಿಸುತ್ತದೆ ಎಂದು ಶಾಸಕ ಲೋಬೊ ಹೇಳಿದರು.

ಸಮಾರಂಭದಲ್ಲಿ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ನ ಎನ್.ಜಿ.ಮೋಹನ್, ಪಿಲಿಕುಳದ ಕಾರ್ಯನಿರ್ವಾಹಕ ನಿರ್ದೇಶಕ ಗಾಯತ್ರಿ ನಾಯಕ್, ವಿಜ್ನಾನ ಕೇಂದ್ರದ ನಿರ್ದೇಶಕ ಡಾ.ಕೆ.ವಿ.ರಾವ್, ಪ್ರಾಜೆಕ್ಟ ಇಂಜಿನಿಯರ್ ಚಂದ್ರಕಾಂತ್, ಆಡಳಿತಾಧಿಕಾರಿ ಬಾಬು ದೇವಾಡಿಗ, ಕೊರ್ಡಿನೇಟರ್ ಮಹಮ್ಮದ್ ಬ್ಯಾರಿ, ಭುವನೇಶ್ವರ, ಸಣ್ಣ ನೀರಾವರಿ ಇಲಾಖೆಯ ಶೇಷಕೃಷ್ಣ ಹಾಗೂ ಕೆ.ಎಸ್.ಆರ್.ಟಿ ನಿರ್ದೇಶಕ ಟಿ.ಕೆ.ಸುಧೀರ್ ಮುಂತಾದವರಿದ್ದರು.


Spread the love