ಫೆ, 24 ಜೆಸಿಐ ಕುತ್ಪಾಡಿ- ಉದ್ಯಾವರ ವತಿಯಿಂದ ಮಳೆ ನೀರಿನೊಂದಿಗೆ ಅನುಸಂಧಾನ ಜಾಗೃತಿ ಮಾಹಿತಿ

Spread the love

ಫೆ, 24 ಜೆಸಿಐ ಕುತ್ಪಾಡಿ- ಉದ್ಯಾವರ ವತಿಯಿಂದ ಮಳೆ ನೀರಿನೊಂದಿಗೆ ಅನುಸಂಧಾನ ಜಾಗೃತಿ ಮಾಹಿತಿ

ಉಡುಪಿ: ಜೇಸಿಐ ಉದ್ಯಾವರ ಕುತ್ಪಾಡಿ ಇವರ ನೇತೃತ್ವದಲ್ಲಿ ,ನವಚೇತನ ಯುವಕ ಮಂಡಲ ಮತ್ತು ನವಚೇತನ ಯುವತಿ ಮಂಡಲ ಹಾಗೂ ಕಥೋಲಿಕ್ ಸಭಾ ಉದ್ಯಾವರ ಘಟಕ ಇವರ ಸಹಕಾರದೊಂದಿಗೆ ಮಳೆ ನೀರಿನೊಂದಿಗೆ ಅನುಸಂಧಾನ ಜಾಗೃತಿ ಮಾಹಿತಿ ಕಾರ್ಯಕ್ರಮ ಫೆಬ್ರವರಿ 24ರಂದು ಸಂಜೆ 6 ಗಂಟೆಗೆ ನವಚೇತನ ಯುವಕ ಮಂಡಲದ ಮೈದಾನ. ಕಟ್ಟೆಗುಡ್ಡೆ ಉದ್ಯಾವರ ಇಲ್ಲಿ ನಡೆಯಲಿದೆ.

ಮಾಹಿತಿ ಕಾರ್ಯಾಗಾರದಲ್ಲಿ ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ಕಾರ್ಯಕ್ರಮ ನಡೆಯಲಿದ್ದು, ಅಂತರ್ಜಲ ಅದರ ಗುಣಮಟ್ಟ ಹಾಗೂ ಜಲ ಸಂರಕ್ಷಣೆ ಮತ್ತು ಪರಿಹಾರ , ದೃಶ್ಯ ಶ್ರಾವ್ಯ ಪ್ರದರ್ಶನದ ಮೂಲಕ ವಿಶೇಷ ಜಾಗೃತಿ ಮಾಹಿತಿ ಕಾರ್ಯಕ್ರಮ ನಡೆಯಲಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love