ಬಡ ನಿರ್ಗತಿಕರ ರಕ್ಷಣೆಗಾಗಿ ಸಮರ್ಪಣ ಎನ್. ಜಿ. ಒ ಉದ್ಘಾಟನೆ

Spread the love

ಬಡ ನಿರ್ಗತಿಕರ ರಕ್ಷಣೆಗಾಗಿ ಸಮರ್ಪಣ ಎನ್. ಜಿ. ಒ ಉದ್ಘಾಟನೆ

ಉಡುಪಿ: ಹಾದಿಬೀದಿಯಲ್ಲಿ ಸುತ್ತಾಡುವ ಬಡ ನಿರ್ಗತಿಕರ ರಕ್ಷಣೆ ಮತ್ತು ಹಾರೈಕೆಗಾಗಿ ನೂತನ ಎನ್. ಜಿ. ಒ `ಸಮರ್ಪಣ’ ಭಾನುವಾರ ನಗರದ ಆಶಾ ನಿಲಯ ಶಾಲೆಯಲ್ಲಿ ಪ್ರಾರಂಭಗೊಂಡಿತು.

ಹಿಂದಿ ಝೀ ವಾಹಿನಿಯ ಸರಿಗಮಪ ಜೂನಿಯರ್ ವಿಭಾಗದಲ್ಲಿ ವಿಜೇತರಾಗಿದ್ದ ಪುತ್ತೂರಿನ ಗಗನ್ ಜಿ.ಗಾಂವ್ಕರ್ ಉದ್ಘಾಟಿಸಿದರು.

ಈ ಸಂದರ್ಭ ಸಮರ್ಪಣಾ ಸಂಸ್ಥೆಯ ಸಂಸ್ಥಾಪಕರಾದ ಪರೀಕ್ಷಿತ್ ಶೇಟ್, ಪ್ರವರಿಕ, ಆಶಾ ನಿಲಯ ಶಾಲೆಯ ಮುಖ್ಯೋಪಾಧ್ಯಾಯಿನಿ ಆಗ್ನೇಸ್ ಹೇಮಾವತಿ, ಉದ್ಯಮಿ ಅರುಣ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.


Spread the love