ಬೆಳ್ತಂಗಡಿ ನದಿಗೆ ಬಿದ್ದು ಕಾಪುವಿನ ಒಂದೇ ಕುಟಂಬದ ನಾಲ್ವರು ಸಾವು

Spread the love

ಬೆಳ್ತಂಗಡಿ ನದಿಗೆ ಬಿದ್ದು ಕಾಪುವಿನ ಒಂದೇ ಕುಟಂಬದ ನಾಲ್ವರು ಸಾವು
ಬೆಳ್ತಂಗಡಿ: ಕಾಜೂರು ದರ್ಗಾ ವೀಕ್ಷಣೆಗೆಂದು ಬಂದ ಕಾಪು ಮೂಲದ ಕುಟುಂಬದ ನಾಲ್ಕು ಮಂದಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಬೆಳ್ತಂಗಡಿಯ ನಡ ಎಂಬಲ್ಲಿ ಬುಧವಾರ ನಡೆದಿದೆ.

ಮೃತರನ್ನು ಉಡುಪಿ ತಾಲೂಕು ಕಾಪು ನಿವಾಸಿಗಳಾದ ರಹೀಮ್ (30), ಈತನ ಪತ್ನಿ ರುಬೀನಾ (25), ಯಾಸ್ಮಿನ್ (23) ಮತ್ತು ಸುಬಾನ್ (15) ಎಂದು ಗುರುತಿಸಲಾಗಿದೆ.

ಕಾಪುವಿನ ಕುಟುಂಬದ ಸದಸ್ಯರು ಕಾಪುವಿನಿಂದ ಕಾಜೂರು ದರ್ಗಾ ವೀಕ್ಷಣೆಗೆಂದು ಬಂದವರು ಜಮಾಲಬಾದ್ ಕೋಟೆ ವೀಕ್ಷಿಸಿ ಹಿಂತಿರುಗುತ್ತಿದ್ದ ವೇಳೆ ನದಿಗೆ ಕುಟುಂಬ ಸಮೇತ ಇಳಿದ್ದಿದ್ದರು. ಅಚಾನಕ್ಕಾಗಿ ತನ್ನ ಕುಟುಂಬದ 15 ವರುಷದ ಬಾಲಕ ನೀರು ಪಾಲಾಗುತ್ತಿದ್ದ ವೇಳೆ ರಕ್ಷಿಸಲು ಹೋದಾಗ ಬಾಲಕನೂ ಸೇರಿದಂತೆ ಐವರು ನೀರುಪಾಲಾಗಿದ್ದು ಇದನ್ನು ನೋಡಿದ ಸ್ಥಳಿಯರು ಓರ್ವ ಮಹಿಳೆಯನ್ನು ರಕ್ಷಿಸುವಲ್ಲಿ ಸಫಲಾಗಿದ್ದಾರೆ.

ಬದಕುಳಿದ ಮಹಿಳೆಯನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೃತರ ಶವಗಳನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love