ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯ ಯೋಜನೆ

Spread the love

ಮಂಗಳೂರು: ಮಂಗಳೂರು ಕ್ಷೇತ್ರದ ಶಾಸಕರಾದ ಜೆ ಆರ್ ಲೋಬೋರವರು ಇಂದು ಬೆಳಿಗ್ಗೆ ನಗರದ ವಿವಿಧೆಡೆ ಅಭಿವೃದ್ಧಿಯ ಯೋಜನೆಯ ಕುರಿತಂತೆ ವಿವಿಧ ಸ್ಥಳಗಳಿಗೆ ಭೇಟಿನೀಡಿದರು.

ಯೋಜನೆಯ ಪರಿಶೀಲನೆಯ ನಂತರ ಶಾಸಕರಾದ ಲೋಬೋರವರು ಮಾದ್ಯಮ ಮಿತ್ರರನ್ನುದ್ದೇಶಿಸಿ ಶಾಸಕರಾದ ಲೋಬೋರವರು ಯೋಜನೆಯ ಸಂಕ್ಷಿಪ್ತ ವರದಿಯನ್ನು ನೀಡಿದರು

1-press-meet-lobo 2-press-meet-lobo-001

ಯೋಜನೆಯ ವಿವರಗಳು ಈ ಕೆಳಗಿನಂತಿವೆ:

ಕದ್ರಿ ಪಾರ್ಕ್ ಅಭಿವೃದ್ಧಿ

ಸಂಗೀತ ಕಾರಂಜಿ ಅಭಿವೃದ್ಧಿ, ಹೂದೋಟ ನಿರ್ಮಾಣ ಹಾಗೂ ಕದ್ರಿ ಪಾರ್ಕ್ ಅಭಿವೃದ್ಧಿ, ವಿದ್ಯುದ್ದೀಪ, ಮುಖ್ಯ ದ್ವಾರ, ಪಾರ್ಕ್‍ನ ಮುಂಭಾಗದ ರಸ್ತೆ ಅಭಿವೃದ್ಧಿ, ವಾಹನ ನಿಲುಗಡೆ ಅಭಿವೃದ್ಧಿ, ಸೊಸೈಟಿ ರಚನೆ.

ಇಲಾಖೆಗಳು : ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ, ತೋಟಗಾರಿಕಾ ಇಲಾಖೆ, ಮಂಗಳೂರು ಮಹಾನಗರ ಪಾಲಿಕೆ, ನಿರ್ಮಿತಿ ಕೇಂದ್ರ.

ಮಂಗಳೂರು ನಗರದ ಮಾರುಕಟ್ಟೆಗಳ ಪುನರ್ ನಿರ್ಮಾಣ. 1) ಕೇಂದ್ರ ಮಾರುಕಟ್ಟೆ. 2) ಕಂಕನಾಡಿ ಮಾರುಕಟ್ಟೆ.3) ಕದ್ರಿ ಮಾರುಕಟ್ಟೆ 4) ಬಿಕರ್ನಕಟ್ಟೆ ಮಾರುಕಟ್ಟೆ. 5) ಅಳಪೆ ಮಾರುಕಟ್ಟೆ.

ಇಲಾಖೆ : ಮಂಗಳೂರು ಮಹಾನಗರ ಪಾಲಿಕೆ. 6) ಉರ್ವ ಮಾರುಕಟ್ಟೆ. 7) ಉರ್ವ ಸ್ಟೋರ್ ಮಾರುಕಟ್ಟೆ.

ಇಲಾಖೆ : ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ.

ಪಂಪುವೆಲ್ ವೃತ್ತದ ಹತ್ತಿರ ಖಾಸಗಿ ಬಸ್ ನಿಲ್ದಾಣ ನಿರ್ಮಾಣ,

ಇಲಾಖೆ : ಮಂಗಳೂರು ಮಹಾನಗರ ಪಾಲಿಕೆ.

ಹಂಪನ್‍ಕಟ್ಟೆ ಹಳೇ ಬಸ್ ನಿಲ್ದಾಣದಲ್ಲಿ ವಾಹನ ತಂಗುದಾಣದ ನಿರ್ಮಾಣ.

ಇಲಾಖೆ : ಮಂಗಳೂರು ಮಹಾನಗರ ಪಾಲಿಕೆ.

ಕಂಕನಾಡಿ ರೈಲ್ವೆ ನಿಲ್ದಾಣಕ್ಕೆ ಅಗಲ ಕಿರಿದಾದ ರಸ್ತೆಯನ್ನು ಅಗಲಗೊಳಿಸಿ ಕಾಂಕ್ರೀಟೀಕರಣಗೊಳಿಸುವುದು.

ಇಲಾಖೆ : ಮಂಗಳೂರು ಮಹಾನಗರ ಪಾಲಿಕೆ.

ರಸ್ತೆ ಮತ್ತು ಫೂಟ್‍ಪಾತ್‍ಗಳ ನಿರ್ಮಾಣ 2ನೇ ಮತ್ತು 3ನೇ 100 ಕೋಟಿ ಯೋಜನೆ ಅನುಷ್ಠಾನ.

ಇಲಾಖೆ : ಮಂಗಳೂರು ಮಹಾನಗರ ಪಾಲಿಕೆ.

ಮಹಾಕಾಳಿಪಡ್ಪುವಿನಲ್ಲಿ ರೈಲ್ವೆ ಕೆಳಸೇತುವೆ ನಿರ್ಮಾಣ.

ಇಲಾಖೆ : ಮಂಗಳೂರು ಮಹಾನಗರ ಪಾಲಿಕೆ, ರೈಲ್ವೆ ಇಲಾಖೆ.

ಕುಡುಪ್ಪಾಡಿಯಲ್ಲಿ ರೈಲ್ವೆ ಕೆಳ ಸೇತುವೆ ನಿರ್ಮಾಣ.

ಇಲಾಖೆ : ಮಂಗಳೂರು ಮಹಾನಗರ ಪಾಲಿಕೆ, ರೈಲ್ವೆ ಇಲಾಖೆ.

ಕುಲಶೇಖರ ಕನ್ನಗುಡ್ಡೆ ರಸ್ತೆ ನಿರ್ಮಾಣ ಮತ್ತು ಕುಲಶೇಖರ-ಕೊಂಗೂರು ಮಠ ರಸ್ತೆ ನಿರ್ಮಾಣ.

ಇಲಾಖೆ : ರೈಲ್ವೆ ಮತ್ತು ಮಂಗಳೂರು ಮಹಾನಗರ ಪಾಲಿಕೆ.

ಪಡೀಲ್ ನಲ್ಲಿ ರೈಲ್ವೆ ಕೆಳ ಸೇತುವೆ ಯೋಜನೆಗೆ ರಸ್ತೆ ಮತ್ತು ಚರಂಡಿಯ ಪೂರಕ ಕಾಮಗಾರಿಗಳು.

ಇಲಾಖೆ : ಮಂಗಳೂರು ಮಹಾನಗರ ಪಾಲಿಕೆ, ರೈಲ್ವೆ ಇಲಾಖೆ.

ಯೆಯ್ಯಾಡಿಯಲ್ಲಿ ವಿಮಾನ ನಿಲ್ದಾಣ ರಸ್ತೆಯಿಂದ ಶಕ್ತಿನಗರ ರಸ್ತೆಯನ್ನು ಅಗಲೀಕರಿಸುವುದು ಮತ್ತು ಕಾಂಕ್ರೀಟೀಕರಣ.

ಇಲಾಖೆ : ಮಂಗಳೂರು ವiಹಾನಗರ ಪಾಲಿಕೆ.

ಮೀನುಗಾರಿಕಾ ಕಾಲೇಜಿನ ಹತ್ತಿರ ಕನಕರ ಬೆಟ್ಟು ರಸ್ತೆ ನಿರ್ಮಾಣ.

ಇಲಾಖೆ : ಮಂಗಳೂರು ಮಹಾನಗರ ಪಾಲಿಕೆ, ಮೀನುಗಾರಿಕಾ ಕಾಲೇಜು.

ತಣ್ಣೀರುಬಾವಿಯಲ್ಲಿ ತೂಗು ಸೇತುವೆ ನಿರ್ಮಾಣ.

ಇಲಾಖೆ : ಲೋಕೋಪಯೋಗಿ.

ನೇತ್ರಾವತಿ – ಕಣ್ಣೂರು ಬೈಪಾಸ್ ರಸ್ತೆ ನಿರ್ಮಾಣ.

ಇಲಾಖೆ : ಲೋಕೋಪಯೋಗಿ.

ನೈಸರ್ಗಿಕ ವಿಕೋಪ ಪರಿಹಾರ ರಸ್ತೆಗಳ ನಿರ್ಮಾಣ.

ಇಲಾಖೆ : ಲೋಕೋಪಯೋಗಿ, ಮಂಗಳೂರು ಮಹಾನಗರ ಪಾಲಿಕೆ.

ಮಿನಿ ವಿಧಾನಸೌಧ ನಿರ್ಮಾಣ.

ಇಲಾಖೆ : ಲೋಕೋಪಯೋಗಿ.

ಸರಕಾರಿ ನೌಕರರಿಗೆ ಉರ್ವ ಸ್ಟೋರ್ ಪಿ.ಡಬ್ಲ್ಯೂಡಿ ಜಾಗದಲ್ಲಿ ಬಹು ಅಂತಸ್ತಿನ ವಸತಿ ಗೃಹಗಳ ನಿರ್ಮಾಣ. ಉಳಿದ ಜಾಗದಲ್ಲಿ ರಂಗ ಮಂದಿರ ನಿರ್ಮಾಣ, ವಾಣಿಜ್ಯ ಸಂಕೀರ್ಣ ನಿರ್ಮಾಣ.

ಇಲಾಖೆ : PWD, ಕರ್ನಾಟಕ ಗೃಹ ಮಂಡಳಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ.

ಕೋರ್ಟು ರಸ್ತೆ ನಿರ್ಮಾಣ.

ಇಲಾಖೆ : ಲೋಕೋಪಯೋಗಿ.

ಬಜಾಲ್ ರಸ್ತೆ ನಿರ್ಮಾಣ.

ಇಲಾಖೆ : ಲೋಕೋಪಯೋಗಿ, ಮಹಾನಗರ ಪಾಲಿಕೆ.

ಉರ್ವ ಮಾರುಕಟ್ಟೆ – ಸುಲ್ತಾನ್ ಬತ್ತೇರಿ ರಸ್ತೆ ನಿರ್ಮಾಣ.

ಇಲಾಖೆ : ಲೋಕೋಪಯೋಗಿ, ಮಹಾನಗರ ಪಾಲಿಕೆ.

ಕಬಡ್ಡಿ ಮತ್ತು ಶಟಲ್ ಒಳಾಂಗಣ ಕ್ರೀಡಾಂಗಣ, ಉರ್ವ ಮಾರುಕಟ್ಟೆ ಹತ್ತಿರ.

ಇಲಾಖೆ : ಕ್ರೀಡಾ ಇಲಾಖೆ, ಮಹಾನಗರ ಪಾಲಿಕೆ.

ಅಂತರಾಷ್ಟ್ರೀಯ ಈಜು ಕೊಳ, ಎಮ್ಮೆಕೆರೆಯಲ್ಲಿ.

ಇಲಾಖೆ : ಕ್ರೀಡಾ ಇಲಾಖೆ.

ಬೊಂದೇಲ್‍ನಲ್ಲಿ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣ.

ಇಲಾಖೆ : ಕ್ರೀಡಾ ಇಲಾಖೆ, ಪಿ.ಡಬ್ಲ್ಯೂಡಿ. ಗುಜ್ಜರಕೆರೆ ಅಭಿವೃದ್ಧಿ.

ಇಲಾಖೆ : ಸಣ್ಣ ನೀರಾವರಿ, ಮಹಾನಗರ ಪಾಲಿಕೆ.

ಮೂರನೇ ಹಂತದ ಮೀನುಗಾರಿಕಾ ಬಂದರು ಅಭಿವೃದ್ಧಿ

ಇಲಾಖೆ : ಮೀನುಗಾರಿಕಾ ಇಲಾಖೆ, ಬಂದರು ಇಲಾಖೆ.

ಬೊಕ್ಕಪಟ್ಣದಲ್ಲಿ ಮೀನುಗಾರಿಕಾ ದಕ್ಕೆ ನಿರ್ಮಾಣ.

ಇಲಾಖೆ : ಮೀನುಗಾರಿಕೆ, ಬಂದರು.

ಹಳೇ ಬಂದರಿನಲ್ಲಿ ರಖಂ ಮೀನುಗಾರಿಕಾ ಮಾರುಕಟ್ಟೆ ಅಭಿವೃದ್ಧಿ.

ಇಲಾಖೆ : ಮೀನುಗಾರಿಕೆ, ಬಂದರು, ಮಹಾನಗರ ಪಾಲಿಕೆ.

ಮಂಗಳೂರು ನಗರದಲ್ಲಿ ಭೂಗತ ವಿದ್ಯುತ್ ಕೇಬಲ್ ಅಳವಡಿಸುವುದು.

ಇಲಾಖೆ : ಮೆಸ್ಕಾಂ.

ಮಣ್ಣಗುಡ್ಡದಲ್ಲಿ ವಿದ್ಯುತ್ ಸಬ್ ಸ್ಟೇಶನ್ ನಿರ್ಮಾಣ.

ಇಲಾಖೆ : ಮೆಸ್ಕಾಂ, ಮಹಾನಗರ ಪಾಲಿಕೆ.

ನೆಹರೂ ಮೈದಾನಿನ ಹತ್ತಿರ ವಿದ್ಯುತ್ ಸಬ್‍ಸ್ಟೇಷನ್ ಮೇಲ್ದರ್ಜೆರೇರಿಸುವುದು.

ಇಲಾಖೆ : ಮೆಸ್ಕಾಂ.

ಕಂಕನಾಡಿ ಗ್ರಾಮೀಣಪೊಲೀಸ್ ಸ್ಟೇಷನ್ ನನ್ನು ವಿಭಜಿಸಿ, ನಗರ ಮತ್ತು ಗ್ರಾಮೀಣ ಎಂದು ಎರಡು ಪೊಲೀಸ್ ಸ್ಟೇಷನ್‍ಗಳ ನಿರ್ಮಾಣ.

ಇಲಾಖೆ : ಕಮಿಶನರ್, ಪೊಲೀಸ್, ಮಂಗಳೂರು.

ಬಜ್ಪೆ ಹತ್ತಿರ ಎಕ್ಕಾರಿನಲ್ಲಿ ಕೇಂದ್ರ ಸರಕಾರದ ರ್ಯಾಪಿಡ್ ಆಕ್ಸನ್ ಫೋರ್ಸ್ ಪಡೆಯನ್ನು ಸ್ಥಾಪಿಸಲು ಜಮೀನು ಮಂಜೂರಾತಿ.

ಇಲಾಖೆ : ಕಂದಾಯ, ಕಮಿಷನರ್, ಪೊಲೀಸ್.

ಮಂಗಳೂರು ನಗರದಲ್ಲಿ ಟ್ರಾಫಿಕ್ ವಾರ್ಡನ್‍ಗಳ ಸ್ಥಾಪನೆ.

ಇಲಾಖೆ : ಪೊಲೀಸ್ ಕಮಿಷನರ್.

ಬೆಂಗ್ರೆಯಲ್ಲಿ ನಗರ ರಿಸರ್ವ್ ಪೊಲೀಸ್ ಪೆರೇಡ್ ಗ್ರೌಂಡ್ ನಿರ್ಮಾಣ.

ಇಲಾಖೆ : ಕಂದಾಯ, ಸಿ.ಆರ್.ಜೆಡ್, ಪೊಲೀಸ್ ಕಮಿಷನರ್.

ಮುಡಿಪುವಿನಲ್ಲಿ ಕೇಂದ್ರ ಕಾರಾಗೃಹ ಸ್ಥಾಪನೆ.

ಇಲಾಖೆ : ಕಾರಾಗೃಹ

ಇಎಸ್‍ಐ ಆಸ್ಪತ್ರೆಯನ್ನು ಕೇಂದ್ರ ಸರಕಾರಕ್ಕೆ ವಹಿಸುವುದು.

ಇಲಾಖೆ : ಇ.ಎಸ್.ಐ. ಆಸ್ಪತ್ರೆ.

ಕರ್ನಾಟಕ ಪಾಲಿಟೆಕ್ನಿಕ್ ಮಂಗಳೂರು, ಇಲ್ಲಿ ರಾತ್ರಿ ಇಂಜಿನಿಯರಿಂಗ್ ಕಾಲೇಜನ್ನು ಆರಂಭಿಸುವುದು.

ಇಲಾಖೆ : ಉನ್ನತ ಶಿಕ್ಷಣ, ಕರ್ನಾಟಕ ಪಾಲಿಟೆಕ್ನಿಕ್.

ಅರ್ಬನ್ ಹೆಲ್ತ್ ಸೆಂಟರುಗಳನ್ನು ಮಂಗಳೂರು ನಗರದಲ್ಲಿ ಆರಂಭಿಸುವುದು.

ಇಲಾಖೆ : ಜಿಲ್ಲಾ ವೈದ್ಯಾಧಿಕಾರಿ  (ಡಿಎಚ್‍ಒ) ಮಂಗಳೂರು ಮಹಾನಗರ ಪಾಲಿಕೆ.

2.5 ಎಂಜಿಡಿ ಹಳೇ ತುಂಬೆ ಮಂಗಳೂರು ನೀರು ಸರಬರಾಜು ಕೊಳವೆಯನ್ನು           ದ.ಕ. ಜಿ.ಪಂ. ಗೆ ಹಸ್ತಾಂತರಿಸುವುದು.

ಇಲಾಖೆ : ದ.ಕ. ಜಿ.ಪಂ. ಮಂಗಳೂರು, ಮಂಗಳೂರು ಮಹಾನಗರ ಪಾಲಿಕೆ.

ವೆನ್‍ಲಾಕ್ ಆಸ್ಪತ್ರೆಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದು.

ಇಲಾಖೆ : ವೆನ್‍ಲಾಕ್ ಆಸ್ಪತ್ರೆ,  ಮಂಗಳೂರು ಮಹಾನಗರ ಪಾಲಿಕೆ.

ಎ.ಡಿ.ಬಿ. 2ನೇ ಹಂತದ ಯೋಜನೆ ಅನುಷ್ಠಾನ.

ಇಲಾಖೆ : ಮಂಗಳೂರು ಮಹಾನಗರ ಪಾಲಿಕೆ.

ಮಂಗಳೂರು ನಗರಕ್ಕೆ ಸ್ಮಾರ್ಟ್ ಸಿಟಿ ಅನುಷ್ಠಾನ.

ಇಲಾಖೆ : ಮಂಗಳೂರು ಮಹಾನಗರ ಪಾಲಿಕೆ.

ಅಮೃತ ಸಿಟಿ.

ಮಹಾನಗರ ಪಾಲಿಕೆ (ಸಂಪೂರ್ಣ ಗಣಕೀಕೃತ)

ಕಣ್ಣೂರಿನಲ್ಲಿ ಬಹುಮಹಡಿ ಆಶ್ರಯ ಯೋಜನೆ.


Spread the love