ಮಂಗಳೂರು ಬೈಕ್ ಅಫಘಾತದಲ್ಲಿ ಕುಂದಾಪುರ ವಿದ್ಯಾರ್ಥಿ ಫೆರ್ಮಿ ಕ್ರಾಸ್ತಾ ಮೃತ್ಯು

Spread the love

ಮಂಗಳೂರು ಬೈಕ್ ಅಫಘಾತದಲ್ಲಿ ಕುಂದಾಪುರ ವಿದ್ಯಾರ್ಥಿ ಫೆರ್ಮಿ ಕ್ರಾಸ್ತಾ ಮೃತ್ಯು

ಮಂಗಳೂರು: ಬೈಕ್ ಹಾಗೂ ಲಾರಿ ನಡುವೆ ನಡೆದ ಅಫಘಾತದಲ್ಲಿ 23 ವರ್ಷ ವಯಸ್ಸಿನ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಕುಂಪಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಸಂಜೆ ನಡೆದಿದೆ.

ಮೃತ ವಿದ್ಯಾರ್ಥಿಯನ್ನು ಕುಂದಾಪುರದ ನಿವಾಸಿ, ಬೀರಿ ಸೈಂಟ್ ಅಲೋಶೀಯಸ್ ಇನ್ಸಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಅ್ಯಂಡ್ ಇನ್ ಫಾರ್ಮೇಶನ್ ಟೆಕ್ನಾಲಜಿ ಇದರ ಎಂಬಿಎ ವಿದ್ಯಾರ್ಥಿ ಫೆರ್ಮಿ ಕ್ರಾಸ್ತಾ ಎಂದು ಗುರುತಿಸಲಾಗಿದೆ.

ಫೆರ್ಮಿ ಕ್ರಾಸ್ತಾ ಅವರು ಸೋಮವಾರ ಸಂಜೆ ತಮ್ಮ ದ್ವಿಚಕ್ರ ವಾಹನದಲ್ಲಿ ತೊಕ್ಕೊಟ್ಟು ಕಡೆಗೆ ತೆರಳುತ್ತಿದ್ದ ವೇಳೆ ಕುಂಪಲ ಮಸೀದಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಯೊಂದು ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಈ ಬಗ್ಗೆ ಉಳ್ಳಾಲ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love