ಮಂಗಳೂರು ಮಹಾನಗರ ಪಾಲಿಕೆ ಸದಸ್ಯ ಶ್ರೀ ಸುಧೀರ್ ಶೆಟ್ಟಿ ಇವರಿಂದ ರಸ್ತೆ ವೇಗ ನಿಯಂತ್ರಕಗಳ ಕೊಡುಗೆ

Spread the love

ಮಂಗಳೂರು ಮಹಾನಗರ ಪಾಲಿಕೆ ಸದಸ್ಯ ಶ್ರೀ ಸುಧೀರ್ ಶೆಟ್ಟಿ ಇವರಿಂದ ರಸ್ತೆ ವೇಗ ನಿಯಂತ್ರಕಗಳ ಕೊಡುಗೆ

ಮಂಗಳೂರು: ಕಣ್ಣೂರು ವಾರ್ಡ್‍ನ ಮ.ನ.ಪಾ ಸದಸ್ಯರಾದ ಸುಧೀರ್ ಶೆಟ್ಟಿ ಇವರು ತಮ್ಮ ವಾರ್ಡಿನ ಕೊಡಕ್ಕಲ್ ರಾಷ್ಟ್ರೀಯ ಹೆದ್ದಾರಿ 75ರಲ್ಲಿ 4ವೇಗ ನಿಯಂತ್ರಕಗಳನ್ನು ಕೊಡುಗೆಯಾಗಿ ನೀಡಿದ್ದು ಇದರ ಉದ್ಘಾಟನೆಯನ್ನು ದಿನಾಂಕ 28.11.2016 ಭಾರತೀಯ ಜನತಾ ಪಾರ್ಟಿ ಮಂಗಳೂರು ನಗರ ದಕ್ಷಿಣ ಮಂಡಲ ಅಧ್ಯಕ್ಷ ಡಿ.ವೇದವ್ಯಾಸ ಕಾಮತ್‍ರವರು ನೇರವೇರಿಸಿ ಕಂಕನಾಡಿ ನಗರ ಪೆÇಲೀಸ್ ಠಾಣೆ, ಗರೋಡಿ ಇದರ ಠಾಣಾಧಿಕಾರಿ ರವಿ ನಾಯಕ್‍ರವರಿಗೆ ಹಸ್ತಾಂತರಿಸಿದರು.

mcc-sudhir-shetty

ಈ ಸ್ಥಳದಲ್ಲಿ ಕಳೆದ 2 ವರ್ಷದಲ್ಲಿ ಹಲವಾರು ಅಪಘಾತಗಳು ಸಂಭವಿಸಿದ್ದು. ಮುಂದಕ್ಕೆ ಆಗುವ ಅಪಘಾತಗಳನ್ನು ತಪ್ಪಿಸುವ ನಿಟ್ಟಿನಲ್ಲಿ ತಮ್ಮ ಸ್ವಂತ ವೆಚ್ಚದಲ್ಲಿ ಕೊಡುಗೆಯಾಗಿ ನೀಡಿ, ಸ್ಥಳೀಯರ ಬೇಡಿಕೆಯನ್ನು ನೇರವೇರಿಸಿರುತ್ತಾರೆ.

ಈ ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲ ಪ್ರಧಾನಕಾರ್ಯದರ್ಶಿ ಭಾಸ್ಕರಚಂದ್ರ ಶೆಟ್ಟಿ, ಹಿಂದುಳಿದ ವರ್ಗ ಮೋರ್ಚಾದ ಅಧ್ಯಕ್ಷ ಸದಾನಂದ ನಾವರ, ಬಿಜೆಪಿ ಕಣ್ಣೂರು ವಾರ್ಡ್ ಅಧ್ಯಕ್ಷ ವಿಶ್ವನಾಥ, ಮ.ನ.ಪಾ ಸದಸ್ಯ ವಿಜಯಕುಮಾರ್ ಶೆಟ್ಟಿ, ಹಿಂದು ಹಿತರಕ್ಷಣಾ ಸಮಿತಿ ಅಧ್ಯಕ್ಷ ಪ್ರೇಮನಾಥ ಸಪಲ್ಯ, ಜಯಪ್ರಕಾಶ್ ಶೆಟ್ಟಿ, ಮಾಜಿ ಮ.ನ.ಪಾ ಸದಸ್ಯ ಮೋಹನ್ ಪಡೀಲ್ ಮತ್ತು ಅನೇಕ ಸ್ಥಳೀಯ ಕಾರ್ಯಕರ್ತರು ಭಾಗವಹಿಸಿದ್ದರು. ಹಿಂದು ಹಿತರಕ್ಷಣಾ ಸಮಿತಿಯ ಕಾರ್ಯದರ್ಶಿ ಭಾಸ್ಕರ ಕೋಟ್ಯಾನ್ ಸ್ವಾಗತ ಮಾಡಿದರು.


Spread the love