ಮರಳು ಸಮಸ್ಯೆಗೆ ಶೀಘ್ರ ಪರಿಹಾರ – ಸಚಿವ ವಿನಯ್ ಕುಮಾರ್ ಸೊರಕೆ

Spread the love

ಕುಂದಾಪುರ: ಮರಳು ಸಮಸ್ಯೆಗೆ ಶೀಘ್ರವೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಮಾರ್ ಸೊರಕೆ ಹೇಳಿದರು.

ಅವರು ಕುಂದಾಪುರದ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿ ಸಾಂಪ್ರಾದಾಯಿಕ ಮರಳುಗಾರಿಕೆಯವರಿಗೆ ತೊಂದರೆಯಾಗದ ರೀತಿಯಲ್ಲಿ ಸರಕಾರ ಹೊಸ ನೀತಿಯನ್ನು ಸರಕಾರ ಜಾರಿಗೆಗೊಳಿಸಲಿದೆ ಎಂದರು.

image002sorake-public-meet-kundapur-20160502 image003sorake-public-meet-kundapur-20160502 image005sorake-public-meet-kundapur-20160502 image006sorake-public-meet-kundapur-20160502

ತಾಲೂಕಿನ ಯಾವುದೇ ಕಡೆ ನೀರಿನ ಸಮಸ್ಯೆ ಕಂಡುಬಂದಲ್ಲಿ ಕೂಡಲೇ ಅಧಿಕಾರಿಗಳು ಜನರಿಗೆ ಕುಡಿಯುವ ನೀರಿನ ಪರ್ಯಾಯ ವ್ಯವಸ್ಥೆಯನ್ನು ಮಾಡುವಂತೆ ಸೂಚಿಸ ಸಚಿವರು, ಇದಕ್ಕೆ ತಪ್ಪಿದ್ದಲ್ಲಿ ಅಂತಹ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

ಇದೇ ವೇಳೆ ತೆಂಗಿನ ಮರದಿಂದ ಬಿದ್ದು ಸಾವನಪ್ಪಿದ ಯಡಾಡಿ ಮತ್ಯಾಡಿ ನಿವಾಸಿ ರಾಜು ಅವರ ಪತ್ನಿ ಜ್ಯೋತಿಗೆ ಕೃಷಿ ಇಲಾಖೆಯಿಂದ ಕೊಡಮಾಡಿದ ಒಂದು ಲಕ್ಷದ ಪರಿಹಾರದ ಚೆಕ್ಕನ್ನು ವಿತರಿಸಿದರು.

ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸಿದ ಸಚಿವರು ಸ್ಥಳದಲ್ಲಿಯೇ ಪರಿಹಾರ ಸೂಚಿಸಿದರು.

.


Spread the love