ಮೀನುಗಾರರ ಮನೆಯಲ್ಲಿ ಫಿಶ್​ ಕರಿ ಮತ್ತು ನೀರು ದೋಸೆ ಸವಿದ ರಾಹುಲ್ ಗಾಂಧಿ

Spread the love

ಮೀನುಗಾರರ ಮನೆಯಲ್ಲಿ ಫಿಶ್​ ಕರಿ ಮತ್ತು ನೀರು ದೋಸೆ ಸವಿದ ರಾಹುಲ್ ಗಾಂಧಿ

ಉಡುಪಿ: ಜನಾಶೀರ್ವಾದ ಯಾತ್ರೆಯ ಭಾಗವಾಗಿ ಉಡುಪಿಗೆ ಭೇಟಿ ನೀಡಿರುವ ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಮೀನುಗಾರರ ಕುಟುಂಬಗಳನ್ನು ಭೇಟಿ ಮಾಡಿ ಅವರ ಸಮಸ್ಯೆ ಆಲಿಸಿದರು.

ಮಂಗಳವಾರ ಬೆಳಗ್ಗೆ ಉಡುಪಿಗೆ ಆಗಮಿಸಿದ ರಾಹುಲ್​ ಗಾಂಧಿ ಎರ್ಮಾಳು ತೆಂಕ ಹೈಸ್ಕೂಲ್​ಗೆ ಭೇಟಿ ನೀಡಿ ಕೆಲ ಕಾಲ ಮಕ್ಕಳೊಂದಿಗೆ ಕಾಲ ಕಳೆದರು. ಆ ನಂತರ ಮೀನುಗಾರರ ಮನೆಗಳಿಗೆ ಭೇಟಿ ನೀಡಿದ ರಾಹುಲ್​ ಗಾಂಧಿ ಅವರ ಸಮಸ್ಯೆಗಳನ್ನು ಆಲಿಸಿದರು. ಈ ಸಮಯದಲ್ಲಿ ನಿಮ್ಮ ಕುಟುಂಬದ ದಿನದ ಆದಾಯ ಎಷ್ಟು, ಸರ್ಕಾರದ ಯೋಜನೆಗಳು ನಿಮಗೆ ತಲುಪಿದೆಯಾ ಎಂದು ಪ್ರಶ್ನಿಸಿದರು.

ಮೀನುಗಾರರು ಒಂದು ತಿಂಗಳಿಗೆ 3-4 ಸಾವಿರ ರೂ. ಆದಾಯ ಇದೆ. ಇದರಿಂದ ಜೀವನ ನಡೆಸುವುದು ಬಹಳ ಕಷ್ಟವಿದೆ. ಸರ್ಕಾರ ನಮಗೋಸ್ಕರ ವಿಶೇಷ ಯೋಜನೆ ರೂಪಿಸಬೇಕೆಂದು ಮನವಿ ಮಾಡಿದರು. ರಾಹುಲ್​ ಗಾಂಧಿ ಮೀನುಗಾರರ ಮನೆಯಲ್ಲಿ ಫಿಶ್​ ಕರಿ ಮತ್ತು ನೀರು ದೋಸೆ ಸವಿದರು.


Spread the love