ಮುಸ್ಲಿಮ್ ವೆಲ್‍ಫೇರ್ ವತಿಯಿಂದ ಅಟೋ ರಿಕ್ಷಾ ಹಾಗೂ ಮೀನಿನ ವ್ಯಾಪಾರಿಗೆ ದ್ವಿಚಕ್ರ ವಾಹನ ವಿತರಣೆ

Spread the love

ಮುಸ್ಲಿಮ್ ವೆಲ್‍ಫೇರ್ ವತಿಯಿಂದ ಅಟೋ ರಿಕ್ಷಾ ಹಾಗೂ ಮೀನಿನ ವ್ಯಾಪಾರಿಗೆ ದ್ವಿಚಕ್ರ ವಾಹನ ವಿತರಣೆ

ಉಡುಪಿ: ಉಡುಪಿ ಮುಸ್ಲಿಮ್ ವೆಲ್‍ಫೇರ್ ಅಸೋಸಿಯೇಶನ್ ವತಿಯಿಂದ ಸ್ವಉದ್ಯೋಗ ಯೋಜನೆಯಡಿ ಅರ್ಹ ಬಡ ರಿಕ್ಷಾ ಚಾಲಕರಿಗೆ ಅಟೋ ರಿಕ್ಷಾ ಹಾಗೂ ಮೀನಿನ ವ್ಯಾಪಾರಿಗೆ ಒಂದು ದ್ವಿಚಕ್ರ ವಾಹನವನ್ನು ಉಡುಪಿಯ ಜಾಮೀಯ ಮಸೀದಿಯಲ್ಲಿ ಶುಕ್ರವಾರ ವಿತರಿಸಲಾಯಿತು.

ಕಾಪುವಿನ ಶಾಕೀರ್ ಕುಡ್ತಿಮಾರ್, ರಫೀಕ್ ಮಜೂರು, ಅಬ್ದುಲ್ ಲತೀಫ್ ಮೂಳೂರು, ಮಯ್ಯದಿ ಆತ್ರಾಡಿ, ಸಲೀಂ ಇಂದಿರಾನಗರ ಅವರಿಗೆ ರಿಕ್ಷಾ ಮತ್ತು ಮುಹಮ್ಮದ್ ಸಾದಿಕ್ ಮೂಡಬೆಟ್ಟು ಅವರಿಗೆ ದ್ವಿಚಕ್ರ ವಾಹನವನ್ನು ವಿತರಿಸಲಾಯಿತು. ನಝೀರ್ ಇಂದಿರಾನಗರ ಅವರ ರಿಕ್ಷಾ ದುರಸ್ತಿಗೆ ಸಹಾಯಧನವನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಮಸೀದಿಯ ಮೌಲಾನ ರಶೀದ್ ಅಹ್ಮದ್ ನದ್ವಿ, ಅಧ್ಯಕ್ಷ ಸೈಯ್ಯದ್ ಯಾಸೀನ್, ಮಣಿಪಾಲ ಮಸೀದಿ ಅಧ್ಯಕ್ಷ ಅಬ್ದುಲ್ಲ ಪರ್ಕಳ, ಮುಸ್ಲಿಮ್ ವೆಲ್‍ಫೇರ್ ಅಸೋಸಿಯೇಶನ್ ಅಧ್ಯಕ್ಷ ಅಬ್ದುಲ್ ಗಫೂರ್ ಕಲ್ಯಾಣಪುರ, ವಿ.ಎಸ್.ಉಮರ್ ಮೊದಲಾದವರು ಉಪಸ್ಥಿತರಿದ್ದರು.


Spread the love