ಯುವಜನರ ಅಭಿವೃದ್ಧಿಗಾಗಿ ಮಿಥುನ್ ರೈ ಗೆಲ್ಲಿಸಿ – ದಕ ಜಿಲ್ಲಾ ಯುವ ಜೆಡಿಎಸ್ ಅಧ್ಯಕ್ಷ ಅಕ್ಷಿತ್ ಸುವರ್ಣ

Spread the love

ಯುವಜನರ ಅಭಿವೃದ್ಧಿಗಾಗಿ ಮಿಥುನ್ ರೈ ಗೆಲ್ಲಿಸಿ – ದಕ ಜಿಲ್ಲಾ ಯುವ ಜೆಡಿಎಸ್ ಅಧ್ಯಕ್ಷ ಅಕ್ಷಿತ್ ಸುವರ್ಣ

ಮಂಗಳೂರು: ಯುವಜನರಿಗೆ ಉದ್ಯೋಗವಕಾಶ, ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಯುವನಾಯಕ, ಮೈತ್ರಿ ಅಭ್ಯರ್ಥಿ ಮಿಥುನ್ ರೈ ಅವರನ್ನು ಗೆಲ್ಲಿಸಿ ಎಂದು ಜೆಡಿಎಸ್ ಯುವಜನತಾದಳ ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ ಹೇಳಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಚುನಾವಣೆ ಘೋಷಣೆ ಆಗುವ ಮೊದಲೇ ತಾಲೂಕು ಮಟ್ಟದಲ್ಲಿ ವಿವಿಧ ತಂಡಗಳನ್ನು ರಚಿಸಿ ಜಿಲ್ಲೆಯ ಮೂಲೆ ಮೂಲೆಗಳಿಗೆ ಚುನಾವಣಾ ಪ್ರಚಾರವನ್ನು ಕೈಗೊಂಡಿದ್ದೇವೆ. ಪ್ರಚಾರ ವೇಳೆ ಮಿಥುನ್ ರೈ ಪರ ಜನರ ಒಲವು ವ್ಯಕ್ತವಾಗಿದೆ. ಜಿಲ್ಲೆಯ ಯುವಕರ ತಂಡವೇ ಮಿಥುನ್ ರೈ ಪರ ನಿಂತಿದೆ. ಅವರ ಗೆಲುವು ಖಚಿತ ಎಂದರು.

ಎಲ್ಲಾ ಸಮುದಾಯದ ಜನರನ್ನು ಜತೆಯಾಗಿ ಕೊಂಡೊಯ್ದು ಜಿಲ್ಲೆಯ ಅಭಿವೃದ್ಧಿ ಕೆಲಸವನ್ನು ಮಿಥುನ್ ರೈ ಅವರು ಮಾಡಲಿದ್ದಾರೆ ಎಂಬ ವಿಶ್ವಾಸ ಜಿಲ್ಲೆಯ ಜನರಿಗೆ ಮೂಡಿದೆ. ಧರ್ಮಗಳ ನಡುವೆ ಬಿರುಕು ಮೂಡಿಸಿ ಆಡಳಿತ ಮಾಡುವ ಇತರ ನಾಯಕರ ವಿರುದ್ಧ ಮಿಥುನ್ ಜಯಬೇರಿಗಳಿಸುವುದು ನಿಶ್ಚಿತ ಎಂದರು.

ಜಿಲ್ಲೆಯಲ್ಲಿರುವ ಹಲವು ಖಾಸಗಿ ಕಂಪೆನಿಗಳಲ್ಲಿ ಇಲ್ಲಿಯ ನಿರುದ್ಯೋಗಿ ಯುವಕರಿಗೆ ಉದ್ಯೋಗ ಕೊಡಿಸುವಲ್ಲಿ ಇಲ್ಲಿಯ ಸಂಸದರು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಮಿಥುನ್ ರೈ ಅವರು ತನ್ನ ಪ್ರಣಾಳಿಕೆಯಲ್ಲಿ ಯುವಕರಿಗೆ ಉದ್ಯೋಗವಕಾಶ ನೀಡುವ ಭರವಸೆ ನೀಡಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ ಮೋದಿ ಹವಾ ಬದಲಾಗಿ ಮಿಥುನ್ ಹವಾ ಬಂದಾಗಿದೆ ಎಂದರು. ಜಿಲ್ಲೆಯ ಅಭಿವೃದ್ಧಿ ದೃಷ್ಠಿಯಿಂದ ಯೋಚಿಸಿ ಮತಚಲಾಯಿಸಿ ಎಂದು ಅವರು ತಿಳಿಸಿದರು.

ಮೊಹಮ್ಮದ್ ಫಝೀಲ್, ಮೊಹಮ್ಮದ್ ಆಸೀಫ್, ರತೇಶ್ ಕರ್ಕೇರ, ಸಿಮಾನ್, ಹಿತೇಶ್ ರಾಜ್, ಲಿಖಿತ್ ರಾಜ್, ಮೊಹಮ್ಮದ್ ರಝಾಕ್ ಉಪಸ್ಥಿತರಿದ್ದರು.


Spread the love