ವಾಕಿಂಗ್ ಹೋಗುತ್ತಿದ್ದ ವೃದ್ಧ ಮಹಿಳೆಯ ಸರ ಅಪಹರಣ

Spread the love

ವಾಕಿಂಗ್ ಹೋಗುತ್ತಿದ್ದ ವೃದ್ಧ ಮಹಿಳೆಯ ಸರ ಅಪಹರಣ

ಉಡುಪಿ: ವಾಕಿಂಗ್ ಹೋಗುತ್ತಿದ್ದ ವೃದ್ದ ಮಹಿಳೆಯ ಚಿನ್ನದ ಸರವನ್ನು ಎಗರಿಸಿದ ಘಟನೆ ಬುಧವಾರ ಸಂಜೆ ಘಟನೆ ನಡೆದಿದೆ.

ಚಡಗರ ಅಗ್ರಾಹಾರ ರಸ್ತೆ, ಸಾಸ್ತಾನ ಪಾಂಡೇಶ್ವರ ನಿವಾಸಿ ಶ್ರೀನಿವಾಸ ಆಚಾರ್ಯ ಅವರ ಪತ್ನಿ ಶ್ರೀಮತಿ ಎಸ್ ಆಚಾರ್ಯ (60), ಇವರು ಬುಧವಾರ ಸಂಜೆ 6:30 ಗಂಟೆಗೆ ವಾಕಿಂಗ್ ಮಾಡಲು ಚಡಗರ ಅಗ್ರಾಹಾರ ರಸ್ತೆಯ ಮೂಲಕ ರಾಷ್ಟ್ರೀಯ ಹೆದ್ದಾರಿ-66 ರ ತನಕ ಹೋಗಿ ವಾಪಾಸ್ಸು ವಾಣಿ ಮತ್ತು ಉಷಾ ಎಂಬುವವರೊಂದಿಗೆ ಮನೆ ಕಡೆಗೆ ಬರುವಾಗ ಮೋಟಾರ್ ಸೈಕಲ್‌ನಲ್ಲಿ ಹಾಗೂ ಸುಮಾರು 25 ವರ್ಷದೊಳಗಿನ ಪ್ರಾಯದ ಯುವಕರು ಬಂದು ಶ್ರೀಮತಿ ಎಸ್ ಆಚಾರ್ಯ ರವರ ಹಿಂದೆ ಬಂದು ಅವರ ಕುತ್ತಿಗೆಯಲ್ಲಿದ್ದ 60,000/- ರೂ ಮೌಲ್ಯದ 4 ಪವನ್ ತೂಕದ 2 ಎಳೆಯ 2 ತಾಳಿ ಇರುವ ಗ್ಲಾಸ್ ಕಟ್ಟಿಂಗ್ ಚಿನ್ನದ ಕರಿಮಣಿ ಸರವನ್ನು ಎಳೆದುಕೊಂಡು ಹೋಗಿದ್ದಾರೆ.

ಈ ಕುರಿತು ಶ್ರೀಮತಿ ಎಸ್ ಆಚಾರ್ಯ ರವರು ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.


Spread the love