ವಿದ್ಯುತ್ ತಂತಿ ಸ್ಪರ್ಶಿಸಿ 4 ಕಾಡಾನೆಗಳು ಸಾವು

Spread the love

ವಿದ್ಯುತ್ ತಂತಿ ಸ್ಪರ್ಶಿಸಿ 4 ಕಾಡಾನೆಗಳು ಸಾವು

ಕೊಡಗು: ವಿರಾಜಪೇಟೆ ಬಳಿಯ ಯದೂರ್ ಕಾಫಿ ತೋಟದಲ್ಲಿ ಸೋಮವಾರ ರಾತ್ರಿ ವಿದ್ಯುತ್ ತಂತಿ ಸ್ಪರ್ಶಿಸಿ ನಾಲ್ಕು ಕಾಡಾನೆಗಳು ಸಾವಿಗೀಡಾಗಿವೆ. ಆನೆಗಳ ಕಳೇಬರ ಮಂಗಳವಾರ ಪತ್ತೆಯಾಗಿದೆ.

ಬಲ್ಲಮೂಲಗಳ ಪ್ರಕಾರ, ಈ ಆನೆಗಳು ಆಹಾರ ಹುಡುಕುತ್ತಾ ನಾಗರಹೊಳೆಯಿಂದ ಇಲ್ಲಿ ತನಕ ಬಂದಿದ್ದವು.

ಈ ಬಗ್ಗೆ ಪ್ರತಿಕ್ರಿಯಿಸಿದ ಕೊಡಗು ಅರಣ್ಯಾಧಿಕಾರಿ ಮನೋಜ್ ಕುಮಾರ್, ಇದು ದುರದೃಷ್ಟಕರ, ವಿದ್ಯುತ್ ಕಂಬಿಗಳನ್ನು 25 ಅಡಿಯಿಂದ ಮೇಲಿರಿಸುವಂತೆ ನಾವು ಸೆಸ್ಕಾಂ (CESCOM) ಅಧಿಕಾರಿಗಳಿಗೆ ಹೇಳಿದ್ದರೂ ಅವರು ಕಿವಿಗೊಡಲಿಲ್ಲ. ಸೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ನಾವು ದೂರು ದಾಖಲಿಸಲಿದ್ದೇವೆ ಎಂದಿದ್ದಾರೆ.

ಕಳೆದ 15 ದಿನಗಳಲ್ಲಿ ಸುಮಾರು 6 ಕಾಡಾನೆಗಳು ವಿದ್ಯುತ್ ತಂತಿ ಸ್ಪರ್ಶಿಸಿ ಸಾವಿಗೀಡಾಗಿವೆ ಎಂದು ಮಾಧ್ಯಮ ವರದಿಗಳು ಹೇಳಿವೆ.


Spread the love