ವಿಶ್ವ ಕೊಂಕಣಿ ಕೇಂದ್ರ ವಿದ್ಯಾರ್ಥಿ ನಾಯಕತ್ವ ಅಭಿವೃದ್ಧಿ ಶಿಬಿರ ಉದ್ಘಾಟನೆ

Spread the love

ಮಂಗಳೂರು: ವಿಶ್ವ ಕೊಂಕಣಿ ಕೇಂದ್ರ ಮಂಗಳೂರು. ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ ಮಂಗಳೂರು ವಿಶ್ವ ಕೇಂದ್ರದ  ಸಹಯೋಗದೊಂದಿಗೆ ಕಾಲೇಜು ವಿದ್ಯಾರ್ಥಿಗಳಿಗೆ  “ವಿದ್ಯಾರ್ಥಿ ನಾಯಕತ್ವ ಅಭಿವೃದ್ಧಿ ಶಿಬಿರ” ವು   ಇಂದು ವಿಶ್ವ ಕೊಂಕಣಿ ಕೇಂದ್ರದಲ್ಲಿ ಜರುಗಿತು.

2

ವಿಶ್ವ ಕೊಂಕಣಿ ಕೇಂದ್ರ ಸ್ಥಾಪಕ ಅಧ್ಯಕ್ಷ ಶ್ರೀ ಬಸ್ತಿ ವಾಮನ ಶೆಣೈ ದೀಪ ಬೆಳಗಿಸಿ ಶಿಬಿರವನ್ನು ಉದ್ಘಾಟಿಸಿದರು.

ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಶ್ರೀ ಡಿ. ರಮೇಶ ನಾಯಕ, ಸ್ಥಾಪಕ ಮತ್ತು  ಶಿಬಿರದ ಪ್ರಾಯೋಜಕ ಶ್ರೀ ಎಮ್. ಎಮ್. ಪ್ರಭು, ಬೆಂಗಳೂರಿನ ಕೈಗಾರಿಕೋದ್ಯಮಿ ಶ್ರೀ ಶ್ರೀಧರ ನಾಯಕ, ಕೃಷಿಕ ಶ್ರೀಮತಿ ವಿಜಯಾ ಶೆಣೈ ಕೊಡಂಗೆ, ನಿವೃತ್ತ ಶಿಕ್ಷಕ ಶ್ರೀ ನಾರಾಯಣ ನಾಯಕ ಸೊಲ್ತಾಡಿ, ತಾಲೂಕು ಪಂಚಾಯತ ಸದಸ್ಯ ಶ್ರೀ ವಿಜಯರಾಜ ವಗ್ಗ, ಉದ್ಯಮಿ ಶ್ರೀ ಅರವಿಂದ ಪ್ರಭು ಬೆಂಗಳೂರು, ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ ಕಾರ್ಯಾಧ್ಯಕ್ಷ ಶ್ರೀ ಸಂಜಯ ಪ್ರಭು, ಸಹ ಕಾರ್ಯದರ್ಶಿ ಶ್ರೀಮತಿ ವಿಜಯ ಲಕ್ಷ್ಮಿ ನಾಯಕ ಹಾಗೂ ವಿವಿಧ ಗಣ್ಯರು ಮತ್ತು ದ.ಕ. ಜಿಲ್ಲೆ, ಉಡುಪಿ ಜಿಲ್ಲೆ ಹಾಗೂ ವಿಶ್ವ ವಿದ್ಯಾನಿಲಯ ಮತ್ತು ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


Spread the love