ಶರತ್ ಕೊಲೆ ಪ್ರಕರಣದ ಪ್ರಮುಖ ಆರೋಪಿಯ ಬಂಧನ

Spread the love

ಶರತ್ ಕೊಲೆ ಪ್ರಕರಣದ ಪ್ರಮುಖ ಆರೋಪಿಯ ಬಂಧನ

ಮಂಗಳೂರು: ಶರತ್ ಮಡಿವಾಳ ಕೊಲೆ ಪ್ರಕರಣದ ಪ್ರಮುಖ ಆರೋಪಿಯನ್ನು ಮೈಸೂರಿನಲ್ಲಿ   ಪೋಲಿಸರು ಬಂಧಿಸಿದ್ದಾರೆ.

ಈಗಾಗಲೇ ಪೋಲಿಸರು 7 ಮಂದಿ ಆರೋಪಗಳನ್ನು ಪೋಲಿಸರು ಬಂಧಿಸಿದ್ದು ಪ್ರಮುಖ ಆರೋಪಿ ಶರೀಫ್ ನ್ನು ಮೈಸೂರಿನ ಬಳಿ ಬಂದಿಸಿದ್ದಾರೆ.
ಬಂದಿತ ಶರೀಫನನ್ನು ಪೋಲಿಸರು ಮಂಗಳೂರಿಗೆ ಕರೆ ತಂದಿದ್ದಾರೆ. ಇನ್ನೋರ್ವ ಪ್ರಮುಖ ಆರೋಪಿ ವಿದೇಶಕ್ಕೆ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಜು.7ರಂದು ಮಂಗಳೂರಿನ ಬಿ.ಸಿ. ರಸ್ತೆಯಲ್ಲಿ ಎಫ್’ಝೆಡ್ ಬೈಕಿನಲ್ಲಿ ಬಂದಿದ್ದ ಪ್ರಮುಖ ಆರೋಪಿ ಷರೀಫ್ ಸೇರಿದಂತೆ ಕಲಂದರ್ ಶಾಫಿ, ಇಬ್ರಾಹಿಂ ಆಗಮಿಸಿ ಶರತ್ ಮೇಲೆ ಗಂಭೀರ ಹಲ್ಲೆ ನಡೆಸಿದ್ದರು. ನಂತರ ಶರತ್’ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಒಂದು ವಾರದ ನಂತರ ಆತ ಕೊನೆಯುಸಿರೆಳೆದಿದ್ದ. ಪ್ರಕರಣ ಸಂಬಂಧ ಈವರೆಗೆ 9 ಆರೋಪಿಗಳನ್ನು ಬಂಧಿಸಲಾಗಿದೆ.

Spread the love