ಶರತ್ ಕೊಲೆ ಪ್ರಕರಣ ಭೇಧಿಸಿದ ಪೋಲಿಸರು; ಪಿಎಫ್ಐ ಸಂಘಟನೆ ಅಧ್ಯಕ್ಷ ಸೇರಿ ಇಬ್ಬರ ಬಂಧನ

Spread the love

ಶರತ್ ಕೊಲೆ ಪ್ರಕರಣ ಭೇಧಿಸಿದ ಪೋಲಿಸರು; ಪಿಎಫ್ಐ ಸಂಘಟನೆ ಅಧ್ಯಕ್ಷ ಸೇರಿ ಇಬ್ಬರ ಬಂಧನ

ಮಂಗಳೂರು: ತೀವ್ರ ಕುತೂಹಲ ಕೆರಳಿಸಿದ್ದ ಶರತ್ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ದಕ ಜಿಲ್ಲಾ ಪೋಲಿಸರು ಯಶಶ್ವಿಯಾಗಿದ್ದಾರೆ.

ಬಂಧಿತರನ್ನು ಸಜಿಪ ಬಂಟ್ವಾಳ ನಿವಾಸಿ ಅಬ್ದುಲ್ ಶಫಿ (36), ಹಾಗೂ ಪಿಎಫ್ ಐ ಚಾಮರಾಜನಗರದ ಅಧ್ಯಕ್ಷ ಖಲೀಲ್ ಉಲ್ಲಾ (30) ಎಂದು ಗುರುತಿಸಲಾಗಿದೆ.

ಜುಲೈ 4 ರಂದು ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಮಡಿವಾಳರನ್ನು ಅವರ ಅಂಗಡಿಯಲ್ಲಿ ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು. ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಶರತ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.

ಘಟನೆಯ ಕುರಿತಂತೆ ಆರೋಪಿಗಳ ಬಂಧನಕ್ಕಾಗಿ ವಿಶೇಷ ತನಿಖಾ ತಂಡವನ್ನು ಪೋಲಿಸರು ರಚಿಸಿದ್ದು ಹಗಲು ರಾತ್ರಿಯೆನ್ನದೆ ಆರೋಪಿಗಳ ಪತ್ತೆ ಬಲೆ ಬೀಸಲಾಗಿತ್ತು ಎಂದು ಸುದ್ದಿಗೋಷ್ಟಿಯಲ್ಲಿ ಪಶ್ಚಿಮ ವಲಯ ಐಜಿಪಿ ಹರೀಶೇಖರನ್ ಮಾಹಿತಿ ನೀಡಿದರು.


Spread the love