ಸಾಲ ತೀರಿಸಲು ತನ್ನ ಮನೆಯಲ್ಲೇ ಕಳವು ಮಾಡಿದ ಆರೋಪಿಯ ಬಂಧನ

Spread the love

ಸಾಲ ತೀರಿಸಲು ತನ್ನ ಮನೆಯಲ್ಲೇ ಕಳವು ಮಾಡಿದ ಆರೋಪಿಯ ಬಂಧನ

ಮಂಗಳೂರು: ಇಸ್ಪೀಟ್ ಚಟಕ್ಕೆ ಬಲಿಯಾಗಿ ಮಾಡಿದ ಸಾಲವನ್ನು ತೀರಿಸಲು ತನ್ನ ಮನೆಯಲ್ಲಿ ಕಳವು ಮಾಡಿದ ಆರೋಪಿಯನ್ನು ಪುಂಜಾಲಕಟ್ಟೆ ಪೊಲೀಸರು ಬಂಧಿಸಿದ್ದಾರೆ.

ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ತಂಗಡಿ ತಾಲ್ಲೂಕು ಕುಕ್ಕಳ ಗ್ರಾಮದ ಗಂಪ ದಡ್ಡ ಯೂಸುಬ್ ಬ್ಯಾರಿ ಅವರ ಮನೆಯ ಹಿಂಬಾಗಿಲನ್ನು ಒಡೆದು ಮನೆಯೊಳಗೆ ಪ್ರವೇಶಿಸಿ ಮನೆಯ ಒಳಗೆ ಇದ್ದ ಕಬ್ಬಿಣದ ಬೀರುವನ್ನು ಯಾವುದೋ ಆಯುಧದಿಂದ ಮೀಟಿ ಬೀರುವಿನ ಒಳಗೆ ಇದ್ದ ಚಿನ್ನದ ಒಡವೆಗಳು ಹಾಗೂ ನಗದು ಕಳ್ಳತನವಾಗಿದ್ದು ಈ ಬಗ್ಗೆ ಠಾಣೆಯಲ್ಲಿ ಮೊ ನಂ :34/2019 ಕಲಂ 454.380 IPC ಪ್ರಕರಣ ದಾಖಲಾಗಿರುತ್ತದೆ.
ಪೊಲೀಸ್ ಅಧೀಕ್ಷಕರು ಶ್ರೀ ಲಕ್ಷ್ಮೀ ಪ್ರಸಾದ್ ದ ಕ ಜಿಲ್ಲೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ವಿಕ್ರಮ್ ಅಮಟೆ ದ ಕ ಜಿಲ್ಲೆ ಮತ್ತು ಸಹಾಯಕ ಪೊಲೀಸ್ ಅಧೀಕ್ಷಕರು ಸೈದುಲ್ ಅದಾವತ ಬಂಟ್ವಾಳ ಉಪವಿಭಾಗ ರವರ ಮಾರ್ಗದರ್ಶನದಲ್ಲಿ ಸಂದೇಶ್ CPI ಬೆಳ್ತಂಗಡಿ ವೃತ್ತ ಮತ್ತು ಶ್ರೀಮತಿ ಕೆಆರ್ ಸುನಿತ PSI ಪುಂಜಾಲಕಟ್ಟೆ ಠಾಣೆಯವರು ಅವರ ತಂಡದೊಂದಿಗೆ ಕಾರ್ಯಾಚರಣೆ ಕೈಗೊಂಡು ಈ ಪ್ರಕರಣದ ಫಿರ್ಯಾದಿ ಸಾದಿಕ್ ತಂದೆ :ಯೂಸುಬ್ ಬ್ಯಾರಿ ಇತನು ಇಸ್ಪೀಟ್ ಚಟಕ್ಕೆ ಬಲಿಯಾಗಿ ತಾನು ಮಾಡಿದ ಸಾಲವನ್ನು ತೀರಿಸಲು ತಾನೇ ಕಳ್ಳತನ ಮಾಡಿರುವುದನ್ನು ಪತ್ತೆ ಹಚ್ಚಿ ಈ ಪ್ರಕರಣದಲ್ಲಿ ಕಳ್ಳತನವಾಗಿದ್ದ 62 ಗ್ರಾಂ ಚಿನ್ನದ ಒಡವೆಗಳನ್ನು ವಶಕ್ಕೆ ಪಡೆದು ಆರೋಪಿತನನ್ನು ಬಂಧಿಸುತ್ತಾರೆ .
ಈ ಪ್ರಕರಣದ ತನಿಖೆ ಮುಂದುವರೆದಿರುತ್ತದೆ .


Spread the love