Home Mangalorean News Kannada News ಅಕ್ರಮ ಗಾಂಜಾ ದಾಸ್ತಾನು – ಒರ್ವನ ಬಂಧನ

ಅಕ್ರಮ ಗಾಂಜಾ ದಾಸ್ತಾನು – ಒರ್ವನ ಬಂಧನ

Spread the love

ಅಕ್ರಮ ಗಾಂಜಾ ದಾಸ್ತಾನು – ಒರ್ವನ ಬಂಧನ

ಉಡುಪಿ: ಅಕ್ರಮ ಗಾಂಜಾ ದಾಸ್ತಾನು ಇರಿಸಿದ್ದ ಆರೋಪಿಯನ್ನು ಉಡುಪಿ ಡಿಸಿಐಬಿ ಪೋಲಿಸರು ಉಡುಪಿ ಪೆರಂಪಳ್ಳಿ ರೈಲ್ವೆ ಸೇತುವೆ ಬಳಿ ಬಂಧಿಸಿದ್ದಾರೆ.

ಬಂಧಿತನನ್ನು ಉಡುಪಿ ಗುಂಡಿಬೈಲು ಶಾಲೆಯ ಬಳಿಯ ನಿವಾಸಿ ಕೌಶಿಕ್ (19) ಎಂದು ಗುರುತಿಸಲಾಗಿದೆ.
ಬಂಧಿತನಿಂದ 13 ಸಾವಿರ ರೂ ಮೌಲ್ಯದ 430 ಗ್ರಾಂ ತೂಕದ ಗಾಂಜಾ ಹಾಗೂ 5 ಸಾವಿರ ರೂ ಮೌಲ್ಯದ ಮೊಬೈಲನ್ನು ಪೋಲಿಸರು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಯನ್ನು ಮಣಿಪಾಲ ಪೋಲಿಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

ಕಾರ್ಯಚಾರಣೆಯಲ್ಲಿ ಉಡುಪಿ ಎಸ್ಪಿ ಡಾ. ಸಂಜೀವ್ ಪಾಟೀಲ್ ನಿರ್ದೇಶನದಲ್ಲಿ ಡಿವೈಎಸ್ಪಿ ಕುಮಾರಸ್ವಾಮಿ ಮಾರ್ಗದರ್ಶನದಲ್ಲಿ ಡಿಸಿಐಬಿ ಪೋಲಿಸ್ ನಿರೀಕ್ಷಕ್ ಸಂಪತ್ ಕುಮಾರ್ ಹಾಗೂ ಎಸೈಗಳಾದ ರೊಸಾರಿಯೊ ಡಿ’ಸೋಜ, ರವಿಚಂದ್ರ, ಸಿಬಂದಿಗಳಾದ ಸುರೇಶ್, ಚಂದ್ರಶೆಟ್ಟಿ, ರಾಮು ಹೆಗ್ಡೆ, ರಾಘವೇಂದ್ರ ಉಪ್ಪುಂದ, ಸಂತೋಶ್ ಕುಂದರ್, ರಾಜ್ ಕುಮಾರ್ ದಯಾನಂದ ಪ್ರಭು, ಪ್ರವೀಣ್, ಶಿವಾನಂದ, ಚಾಲಕ ರಾಘವೇಂದ್ರ ನಡೆಸಿದ್ದಾರೆ.

ಈ ಬಗ್ಗೆ ಮಣಿಪಾಲ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.


Spread the love

Exit mobile version