Home Mangalorean News Kannada News ಆಕಾಶವಾಣಿಯ ಡಾ. ಪೆರ್ಲ ಅವರಿಗೆ ಸಿದ್ದಯ್ಯ ಪುರಾಣಿಕ ಸಾಹಿತ್ಯ ಪ್ರಶಸ್ತಿ

ಆಕಾಶವಾಣಿಯ ಡಾ. ಪೆರ್ಲ ಅವರಿಗೆ ಸಿದ್ದಯ್ಯ ಪುರಾಣಿಕ ಸಾಹಿತ್ಯ ಪ್ರಶಸ್ತಿ

Spread the love

ಆಕಾಶವಾಣಿಯ ಡಾ. ಪೆರ್ಲ ಅವರಿಗೆ ಸಿದ್ದಯ್ಯ ಪುರಾಣಿಕ ಸಾಹಿತ್ಯ ಪ್ರಶಸ್ತಿ

ಮಂಗಳೂರು: ಕವಿ, ಸಾಹಿತಿ ಹಾಗೂ ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ಮುಖ್ಯಸ್ಥ ಡಾ. ವಸಂತಕುಮಾರ ಪೆರ್ಲ ಅವರಿಗೆ ಇತ್ತೀಚೆಗೆ ಕೊಪ್ಪಳದಲ್ಲಿ ಜರುಗಿದ ಕೊಪ್ಪಳ ಜಿಲ್ಲಾ ಉತ್ಸವದ ಸಂದರ್ಭದಲ್ಲಿ ಡಾ. ಸಿದ್ದಯ್ಯ ಪುರಾಣಿಕ ಸಾಹಿತ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

vasanth-kumar-perla

ಡಾ. ಪೆರ್ಲ ಅವರನ್ನು ಕಾವ್ಯ, ಕತೆ, ಕಾದಂಬರಿ, ವಿಮರ್ಶೆ, ಸಂಶೋಧನೆ, ಸಂಪಾದನೆ, ಚಾರಣ ಸಾಹಿತ್ಯ, ವ್ಯಕ್ತಿ ಚಿತ್ರ ಮುಂತಾದ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಸಲ್ಲಿಸಿದ ಬಹುಮುಖೀ ಪರಿಶ್ರಮವನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ಸಾಹಿತ್ಯ ಕೃಷಿಯಲ್ಲದೇ ಸಂಘಟನೆಯಲ್ಲಿ ಅವರು ದುಡಿದಿದ್ದಾರೆ. ಕಳೆದ ದಿನಾಂಕ 24ರಿಂದ 28 ರವರೆಗೆ ಕೊಪ್ಪಳ ಜಿಲ್ಲಾ ಉತ್ಸವ ಏರ್ಪಟ್ಟಿತ್ತು.


Spread the love

Exit mobile version