Home Mangalorean News Kannada News ಉಡುಪಿಯಲ್ಲಿ ಸಂಭ್ರಮದ ‘ಬಾಂಧವ್ಯ ಕ್ರಿಸ್‍ಮಸ್’

ಉಡುಪಿಯಲ್ಲಿ ಸಂಭ್ರಮದ ‘ಬಾಂಧವ್ಯ ಕ್ರಿಸ್‍ಮಸ್’

Spread the love

ಉಡುಪಿಯಲ್ಲಿ ಸಂಭ್ರಮದ ‘ಬಾಂಧವ್ಯ ಕ್ರಿಸ್‍ಮಸ್’

ಉಡುಪಿ: ಯುನಾಯ್ಟೆಡ್ ಬಾಸೆಲ್ ಮಿಷನ್ ಚರ್ಚಸ್, ಉಡುಪಿ ಡಿಸ್ಟ್ರಿಕ್ಟ್ ಫುಲ್ ಗೊಸ್ಪಲ್ ಚರ್ಚಸ್, ಚರ್ಚ್ ಆಫ್ ಸೌತ್ ಇಂಡಿಯಾ ಹಾಗೂ ಉಡುಪಿ ಕಥೋಲಿಕ ಧರ್ಮಪ್ರಾಂತ್ಯದ ಜಂಟಿ ಆಶ್ರಯದಲ್ಲಿ, ‘ಬಾಂಧವ್ಯ ಕ್ರಿಸ್ಮಸ್ ಸಂಭ್ರಮ’ ಉಡುಪಿಯ ಮದರ್ ಆಫ್ ಸಾರೋಸ್ ಚರ್ಚ್‍ನ ಸಭಾಂಗಣದಲ್ಲಿ ಡಿಸೆಂಬರ್ 16 ರಂದು ನೆರವೇರಿತು.

ಪರಮಪೂಜ್ಯ ಜೆರಾಲ್ಡ್ ಲೋಬೊ, ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರು, ಪಾಸ್ಟರ್ ಗೋಪಿನಾಥನ್, ಅಧ್ಯಕ್ಷರು, ಉಡುಪಿ ಡಿಸ್ಟ್ರಿಕ್ಟ್ ಫುಲ್ ಗೊಸ್ಪಲ್ ಚರ್ಚಸ್ ಪಾಸ್ಟರ್ಸ್ ಎಸೋಸಿಯೇಶನ್, ಜಯಪ್ರಕಾಶ್ ಸೈಮನ್ಸ್, ಚೇರ್‍ಮ್ಯಾನ್, ಯುಬಿಎಂಸಿ ಟ್ರಸ್ಟ್, ರೆವರೆಂಡ್ ಐವನ್ ಡಿ. ಸೋನ್ಸ್, ಸಿಎಸ್‍ಐ ಚರ್ಚ್ ಉಡುಪಿ, ಪ್ರಶಾಂತ್ ಜತ್ತನ್ನ, ಬಿಗ್‍ಜೆ ಟಿವಿಯ ಮ್ಹಾಲಕರು ಹಾಗೂ ಸಮಾಜಸೇವಕರು ಮತ್ತು ಇನ್ನಿತರ ಗಣ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಫಾದರ್ ವಿನ್ಸೆಂಟ್ ಕ್ರಾಸ್ತಾ, ಉಡುಪಿ ಧರ್ಮಪ್ರಾಂತ್ಯದ ಶಿಕ್ಷಣ ಇಲಾಖೆಯ ಕಾರ್ಯದರ್ಶಿ, ರೆವರೆಂಡ್ ಅಕ್ಷಯ್ ಅಮ್ಮನ್ನ, ಕೊರಂಗ್ರಪಾಡಿ ಕ್ರಿಸ್ತ ಮಹಿಮಾ ಚರ್ಚಿನ ಸಭಾಪಾಲಕರು, ಪಾಸ್ಟರ್ ಗೋಪಿನಾಥನ್ ಹಾಗು ಜಯಪ್ರಕಾಶ್ ಸೈಮನ್ಸ್‍ರವರು ಕ್ರಿಸ್‍ಮಸ್ ಸಂದೇಶವನ್ನು ಹಂಚಿಕೊಂಡರು. ಪ್ರತಿ ಚರ್ಚಿಗೆ ಸೇರಿದ ಸದಸ್ಯರು ಕ್ರಿಸ್‍ಮಸ್ ಹಾಡು, ನೃತ್ಯ ಹಾಗೂ ಕಿರುನಾಟಕಗಳಿಂದ ಕ್ರಿಸ್‍ಮಸ್ ಸಂತೋಷವನ್ನು ಹಂಚಿಕೊಂಡರು.

ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ಫಾದರ್ ಚೇತನ್ ಲೋಬೊ ಸ್ವಾಗತಿಸಿ ಕಾರ್ಯಕ್ರಮವನ್ನು ನಡೆಸಿದರು. ಪ್ರಶಾಂತ್ ಜತ್ತನ್ನ ವಂದನಾರ್ಪಣೆಗೈದರು. ಸಿಹಿತಿಂಡಿ ಹಂಚಿಕೊಳ್ಳುವಿಕೆ ಕ್ರಿಸ್ಮಸ್ ಸಂತೋಷವನ್ನು ವೃದ್ಧಿಸಿತು.


Spread the love

Exit mobile version