Home Mangalorean News Kannada News ಉಡುಪಿ | ಕುಡಿದ ಮತ್ತಿನಲ್ಲಿ ತ‌ನ್ನದೇ ಮನೆಗೆ ಬೆಂಕಿ‌ ಹಚ್ಚಿದ ವ್ಯಕ್ತಿ

ಉಡುಪಿ | ಕುಡಿದ ಮತ್ತಿನಲ್ಲಿ ತ‌ನ್ನದೇ ಮನೆಗೆ ಬೆಂಕಿ‌ ಹಚ್ಚಿದ ವ್ಯಕ್ತಿ

Spread the love

ಉಡುಪಿ | ಕುಡಿದ ಮತ್ತಿನಲ್ಲಿ ತ‌ನ್ನದೇ ಮನೆಗೆ ಬೆಂಕಿ‌ ಹಚ್ಚಿದ ವ್ಯಕ್ತಿ

ಉಡುಪಿ : ಕುಡಿದ ಮತ್ತಿನಲ್ಲಿ ವ್ಯಕ್ತಿಯೊರ್ವ ತ‌ನ್ನದೇ ಮನೆಗೆ ಬೆಂಕಿ‌ ಹಚ್ಚಿದ ಘಟನೆ ನಗರದ ಹೊರವಲಯದ ಚಿಟ್ಪಾಡಿಯಲ್ಲಿ ರವಿವಾರ ನಡೆದಿದೆ.

ಕುಡಿದ ಮತ್ತಿನಲ್ಲಿ ವ್ಯಕ್ತಿಯ ರಂಪಾಟ, ವರ್ತನೆ ಎದುರಿಸಲು ಅಸಹಾಯಕರಾದ ಮನೆಯವರು, ಸಮಾಜಸೇವಕ ನಿತ್ಯಾನಂದ‌ ಒಳಕಾಡುವರಲ್ಲಿ ನೆರವಿಗೆ ಬರುವಂತೆ ಕೇಳಿಕೊಂಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಒಳಕಾಡು ಅವರು ಅಗ್ನಿಶಾಮಕ ದಳದವರಿಗೆ ವಿಷಯ ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಿ ದೊಡ್ಡ ಪ್ರಮಾಣದಲ್ಲಿ ಆಗಬಹುದಾದ ಅಗ್ನಿದುರಂತವನ್ನು ತಪ್ಪಿಸಿದ್ದಾರೆ. ಬಳಿಕ ಒಳಕಾಡು ಅವರು ಕುಡುಕನ‌‌ ಮೊನವೊಲಿಸಿ ಮಧ್ಯವರ್ಜನ‌ ಕೇಂದ್ರಕ್ಕೆ ದಾಖಲು ಮಾಡಿದ್ದಾರೆ.


Spread the love

Exit mobile version