
ಉಡುಪಿ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್ ಪ್ರಚಾರ ಸಮಿತಿಯ ಸಂಯೋಜಕರ ನೇಮಕ
ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಈ ಕೆಳಗಿನ ವಿಧಾನಸಭಾ ಕ್ಷೇತ್ರದ ಪ್ರಚಾರ ಸಮಿತಿಗೆ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಸಂಯೋಜಕರರಾದ ಅಲೆವೂರು ಹರೀಶ್ ಕಿಣಿಯವರ ಶಿಫಾರಸ್ಸಿನ ಮೇರೆಗೆಹಾಗೂ ರಾಜ್ಯ ಪ್ರಚಾರ ಸಮಿತಿಯ ಅಧ್ಯಕ್ಷರಾದ ಎಂ.ಬಿ. ಪಾಟೀಲ್ರವರ ಅನುಮೋದನೆಯೊಂದಿಗೆ “ಸಂಯೋಜಕರನ್ನು ಹಾಗೂ ಜಂಟಿ ಸಂಯೋಜಕ”ರನ್ನಾಗಿ ಈ ಕೆಳಕಂಡವರನ್ನು ನೇಮಿಸಲಾಗಿದೆ.
ಕಾರ್ಕಳ ವಿಧಾನಸಭಾ ಕ್ಷೇತ್ರ– ಸುಪ್ರೀತ್ ಶೆಟ್ಟಿ, ಕೆದಿಂಜೆ- ಸಂಯೋಜಕರು
ಕಾರ್ಕಳ ಬ್ಲಾಕ್ – ಶುಭದ ರಾವ್, ಕಾರ್ಕಳ- ಜಂಟಿ ಸಂಯೋಜಕರು
ಹೆಬ್ರಿ ಬ್ಲಾಕ್– ನವೀನ್ ಅಡ್ಯಂತಾಯ, ಹೆಬ್ರಿ-ಜಂಟಿ ಸಂಯೋಜಕರು
ಬೈಂದೂರು ವಿಧಾನಸಭಾ ಕ್ಷೇತ್ರ – ಪ್ರಕಾಶ್ಚಂದ್ರ ಶೆಟ್ಟಿ- ಸಂಯೋಜಕರು
ಬೈಂದೂರು ಬ್ಲಾಕ್- ಡಾ. ಸುಬ್ರಹ್ಮಣ್ಯ ಭಟ್- ಜಂಟಿ ಸಂಯೋಜಕರು
ವಂಡ್ಸೆ ಬ್ಲಾಕ್- ಭಾಸ್ಕರ್ ನಾಯ್ಕ್, ಕರ್ಕುಂಜೆ-ಜಂಟಿ ಸಂಯೋಜಕರು
ಕುಂದಾಪುರ-ವಿಧಾನಸಭಾ ಕ್ಷೇತ್ರ- ಅಶೋಕ್ ಪೂಜಾರಿ, ಬೀಜಾಡಿ – ಸಂಯೋಜಕರು
ಕುಂದಾಪುರ ಬ್ಲಾಕ್- ಆಶಾ ಲೂಯಿಸ್ ಕಾರ್ವಾಲೊ- ಜಂಟಿ ಸಂಯೋಜಕರು
ಕೋಟ ಬ್ಲಾಕ್- ವಾಸುದೇವ ಕೋಟ್ಯಾನ್, ಐರೋಡಿ- ಜಂಟಿ ಸಂಯೋಜಕರು
ಉಡುಪಿ ವಿಧಾನಸಭಾ ಕ್ಷೇತ್ರ- ಕೃಷ್ಣಮೂರ್ತಿಆಚಾರ್ಯ – ಸಂಯೋಜಕರು
ಉಡುಪಿ ಬ್ಲಾಕ್ – ಪ್ರಶಾಂತ್ ಪೂಜಾರಿ- ಜಂಟಿ ಸಂಯೋಜಕರು
ಬ್ರಹ್ಮಾವರ ಬ್ಲಾಕ್- ರಾಘವೇಂದ್ರ ಶೆಟ್ಟಿ ಕರ್ಜೆ-ಜಂಟಿ ಸಂಯೋಜಕರು
ಕಾಪು ವಿಧಾನಸಭಾ ಕ್ಷೇತ್ರ- ವಿಶ್ವಾಸ್ ಅಮೀನ್ – ಸಂಯೋಜಕರು
ಕಾಪು ದಕ್ಷಿಣ ಬ್ಲಾಕ್- ಜಿತೇಂದ್ರ ಫುಟಾರ್ಡೊ – ಜಂಟಿ ಸಂಯೋಜಕರು
ಕಾಪು ಉತ್ತರ ಬ್ಲಾಕ್- ಚರಣ್ ವಿಠಲ್ ಕುದಿ – ಜಂಟಿ ಸಂಯೋಜಕರು
ನೇಮಕಗೊಂಡ ಸಂಯೋಜಕರು ಮತ್ತು ಜಂಟಿ ಸಂಯೋಜಕರು ಈ ಕೂಡಲೇ ಕಾರ್ಯೋನ್ಮುಖರಾಗಿ ತಮ್ಮ ಜವಾಬ್ದಾರಿ ವಹಿಸಿಕೊಂಡು ಪಕ್ಷ ಸಂಘಟನೆ, ಪಕ್ಷದ ತತ್ವ ಸಿದ್ಧಾಂತ, ಕಾಂಗ್ರೆಸ್ ಸರಕಾರದ ಸಾಧನೆ ಹಾಗೂ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಗಳನ್ನು ಜನರಿಗೆ ಮನದಟ್ಟು ಮಾಡುವ ರೀತಿಯಲ್ಲಿ ಪ್ರಚಾರ ಮಾಡಲು ನಿರ್ದೇಶಿಸಲಾಗಿದೆ ಎಂದು ಪ್ರಚಾರ ಸಮಿತಿಯ ರಾಜ್ಯ ಸಮಿತಿಯ ಸಹ ಅಧ್ಯಕ್ಷ ಮಂಜುನಾಥ ಭಂಡಾರಿ ತಿಳಿಸಿದ್ದಾರೆ.