ಉರ್ವಾ ಚಿಲಿಂಬಿ ಮಲರಾಯ ದೈವಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿ ಲೋಬೊ ಭೇಟಿ 

Spread the love

ಉರ್ವಾ ಚಿಲಿಂಬಿ ಮಲರಾಯ ದೈವಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿ ಲೋಬೊ ಭೇಟಿ 

ಉರ್ವಾ ಚಿಲಿಂಬಿಯಲ್ಲಿರುವ ಶ್ರೀ ಮಲರಾಯ ಧೂಮಾವತಿ ದೈವಸ್ಥಾನಕ್ಕೆ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜೆ. ಆರ್. ಲೋಬೊ ರವರು  ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ದೈವಸ್ಥಾನ ಸಮಿತಿ ಅಧ್ಯಕ್ಷ ಎ. ವಿ. ಸುರೇಶ್ ರಾವ್, ಡಾ. ಬಿ.ಜಿ. ಸುವರ್ಣ, ಸದಾನಂದ ಅಮೀನ್ ಮಾಜಿ ಕಾರ್ಪೊರೇಟರ್ ಪದ್ಮನಾಭ ಅಮೀನ್, ಟಿ. ಕೆ. ಸುಧೀರ್, ಪ್ರಥ್ವಿ, ರವಿ ಉರ್ವಾ, ರವಿ ಅಮೀನ್ ಮೊದಲಾದವರು ಉಪಸ್ಥಿತರಿದ್ದರು.


Spread the love