
ಕನ್ನಡ ಪಾಠ ಶಾಲೆ ದುಬೈಗೆ ಅಧಿಕೃತ ಸ್ಥಾನ – ಭರವಸೆ ನೀಡಿದ ಸಚಿವ ಸುನಿಲ್ ಕುಮಾರ್
ಕನ್ನಡ ಮಿತ್ರರು ಯು ಎ ಇ ಆಯೋಜನೆಯ ಕನ್ನಡ ಪಾಠ ಶಾಲೆ ದುಬೈ ನ 20 ಶಿಕ್ಷಕಿಯರೂ ಕನ್ನಡ ಅಭಿವೃದ್ಧಿ ಪ್ರಾಧಿಕಾರ ದಿಂದ ತರಬೇತಿ ಪಡೆದು , ಕನ್ನಡ ಭಾಷಾ ಬೋಧನೆ ಯನ್ನು ಉಚಿತವಾಗಿ ಮಾಡುತ್ತಿದ್ದು , ಶಾಲೆ ನೀಡುವ ಕನ್ನಡ ಪರಿಣಿತಿ ಪ್ರಮಾಣ ಪತ್ರಕ್ಕೆ ಅಧಿಕೃತ ಸ್ಥಾನ ಮಾನ ನೀಡಿ , 12ನೇ ತರಗತಿಯನ್ನು ವಿದೇಶದಲ್ಲಿ ಓದಿದ ಕನ್ನಡಿಗರ ಮಕ್ಕಳಿಗೆ CET ಪರೀಕ್ಷೆ ಬರೆಯಲು ಅವಕಾಶ ಕೋರಿ ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಸುನಿಲ್ ಕುಮಾರ ರವರನ್ನು 13ನೇ ಮಾರ್ಚ್ ನಂದು ಕಾರ್ಕಳದಲ್ಲಿ ಬೇಟಿಯಾಗಿ ಮನವಿ ಸಲ್ಲಿಸಲಾಯಿತು.
ಮನವಿಯನ್ನು ಗಂಭೀರವಾಗಿ ಪರಿಗಣಿಸಿದ ಸಚಿವರು , ಬೇಡಿಕೆ ಸರಿಯಾಗಿದೆ ಮತ್ತು ಕನ್ನಡ ಕಲಿತ ಅನಿವಾಸಿ ಮಕ್ಕಳಿಗೆ ಸಿಗಬೇಕಾದ ಉತ್ತೇಜನ ಆದುದ್ದರಿಂದ ಮನವಿಯನ್ನು ಶೀಘ್ರ ಕ್ರಮಕ್ಕೆ ಕಳಿಸುವ ಭರವಸೆ ನೀಡಿದರು
ಯು ಎ ಇ ದೇಶದಿಂದ ಭೇಟಿ ನೀಡಿದ್ದ ಕನ್ನಡ ಪಾಠ ಶಾಲೆ ದುಬೈ ನ ಮಹಾ ಪೋಷಕ ಪ್ರವೀಣ್ ಕುಮಾರ್ ಶೆಟ್ಟಿ ,ಅಧ್ಯಕ್ಷ ಶ್ರೀ ಶಶಿಧರ್ ನಾಗರಾಜಪ್ಪ ,ಉಪಾಧ್ಯಕ್ಷ ಸಿದ್ದಲಿಂಗೇಶ್ ಮತ್ತು ಖಜಾಂಚಿ ನಾಗರಾಜ್ ರಾವ್ ಸಚಿವರಿಗೆ ವಿಸ್ತಾರವಾಗಿ ವಿಷಯದ ಬಗ್ಗೆ ಮಾಹಿತಿ ನೀಡಿದರು .
ಅದೇ ದಿನ ಅದ್ಧೂರಿಯಾಗಿ ಜರುಗಿದ ಶ್ರೀ ಮಾರಿಯಮ್ಮ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ದುಬೈನ ತಂಡ ವಿಶೇಷ ಅತಿಥಿಗಳಾಗಿ ಸತ್ಕಾರಗೊಂಡರು