ಕಷ್ಟ ಕಾಲದಲ್ಲಿ ನೆರವಾಗುವುದು ಮಾನವ ಧರ್ಮ – ಡಿ ಟಿ ಪ್ರಕಾಶ್ 

Spread the love

ಕಷ್ಟ ಕಾಲದಲ್ಲಿ ನೆರವಾಗುವುದು ಮಾನವ ಧರ್ಮ – ಡಿ ಟಿ ಪ್ರಕಾಶ್ 

ಮೈಸೂರು: ದೇಶ ಮತ್ತು ರಾಜ್ಯ ದಲ್ಲಿ ಕೊರೊನಾದ ರುದ್ರ ತಾಂಡವ ಮುಂದುವರಿದಿದ್ದು, ನಗರ ಮತ್ತು ಗ್ರಾಮೀಣ ಪ್ರದೇಶದ ತೀರಾ ಸಂಕಷ್ಟಕ್ಕೊಳಗಾಗಿರುವುದರಿಂದ ನಾಡಿನ ಜನ ಕೊರೊನಾ ಹಿಮ್ಮೆಟ್ಟಿಸಲು ಪಕ್ಷಭೇದ, ಜಾತಿಮತ ಮರೆತು ಒಟ್ಟಾಗಿ ಹೊರಡುವಂತೆ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್ ಹೇಳಿದರು.

ಲಾಕ್ ಡೌನ್ ನಿಂದ ಸಂಕಷ್ಟದಲ್ಲಿರುವ ಅರ್ಚಕರ ಪುರೋಹಿತರ ಕುಟುಂಬ ವರ್ಗಕ್ಕೆ ಅಪೂರ್ವ ಸ್ನೇಹ ಬಳಗ ಮತ್ತು ಸುಮುಖ ಕನ್‍ ಸ್ಟ್ರಕ್ಷನ್ ವತಿಯಿಂದ ಚಾಮುಂಡಿಪುರಂ ಅಪೂರ್ವ ಹೊಟೆಲ್ ಸಭಂಗಣದಲ್ಲಿ ಆಹಾರ ದಿನಸಿ ಕಿಟ್ ವಿತರಿಸಿ ಮಾತನಾಡಿ, ಕಷ್ಟಕಾಲದಲ್ಲಿ ಒಬ್ಬರಿಗೊಬ್ಬರು ನೆರವಾಗುವುದೇ ಮಾನವ ಧರ್ಮ, ಉಳ್ಳವರು ಮನಸ್ಸು ಬಿಚ್ಚಿ ಕೊರೊನಾ ರೋಗಿಗಳಿಗೆ ವಿವಿಧ ರೀತಿಯಲ್ಲಿ ಸಹಕಾರ ಮಾಡುವಂತೆ ಮನವಿ ಮಾಡಿದರು.

ಇದೇ ಸಂಧರ್ಭದಲ್ಲಿ ಬ್ರಾಹ್ಮಣ ಸಂಘದ ಕಾರ್ಯದರ್ಶಿ ಅಪೂರ್ವ ಸುರೇಶ್, ಸುಮುಖ ಕನ್ ಸ್ಟ್ರಕ್ಷನ್ ಮಾಲೀಕರಾದ ಅರುಣ್, ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕರಾದ ಗಿರೀಶ್, ಸಂಘಟನಾ ಕಾರ್ಯದರ್ಶಿ ಅಜಯ್ ಶಾಸ್ತ್ರಿ, ಚಕ್ರಪಾಣಿ, ನವೀನ್, ಚೇತನ್ ಕಾಂತರಾಜು ಹಾಗೂ ಇನ್ನಿತರರು ಇದ್ದರು


Spread the love