Home Mangalorean News Kannada News ಕುಂದಾಪುರ: ಟಿಪ್ಪರ್ – ಸ್ಕೂಟರ್ ಅಫಘಾತ ಹೋಟೆಲ್ ಮ್ಯಾನೇಜರ್ ಸಾವು

ಕುಂದಾಪುರ: ಟಿಪ್ಪರ್ – ಸ್ಕೂಟರ್ ಅಫಘಾತ ಹೋಟೆಲ್ ಮ್ಯಾನೇಜರ್ ಸಾವು

Spread the love

ಕುಂದಾಪುರ: ಟಿಪ್ಪರ್ ಮತ್ತು ಸ್ಕೂಟರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಸ್ಕೂಟರ್ ಸವಾರ ಮೃತಪಟ್ಟ ಘಟನೆ ನಗರದ ಶಾಸ್ತ್ರೀ ಸರ್ಕಲ್ ಸಮೀಪ ಗುರುವಾರ ನಡೆದಿದೆ.

Kund_4_15-001

ಮೃತರನ್ನು ಶರೋನ್ ಹೋಟೆಲ್ ಕಾಂಪ್ಲೆಕ್ಸ್ ಹರ್ಷ ರಿಫ್ರೆಶ್ ಮೆಂಟ್ ಉಪಾಹರ ಗೃಹದಲ್ಲಿ ಮ್ಯಾನೇಜರ್ ಆಗಿದ್ದ ನರಸಿಂಹ ಐತಾಳ್ ಎಂದು ಗುರುತಿಸಲಾಗಿದೆ.

ಶುಕ್ರವಾರ ನರಸಿಂಹ ಐತಾಳ್ ತಮ್ಮ ಸ್ಕೂಟರಿನಲ್ಲಿ ಅಂಕದಕಟ್ಟೆಯ ತಮ್ಮ ಮನೆಯತ್ತ ಹೋಗುತ್ತಿದ್ದ ವೇಳೆ ರಾಷ್ಟ್ರೀಯ ಹೆದ್ದಾರಿಯ ಕೆಲಸ ನಿರ್ವಹಿಸುತ್ತಿದ್ದ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಬಿದ್ದು ಸಾವನಪ್ಪಿದ್ದಾರೆ ಎನ್ನಲಾಗಿದೆ.

ಕುಂದಾಪುರ ಸಂಚಾರಿ ಠಾಣೆಯಲ್ಲಿ ಕೇಸು ದಾಖಲಾಗಿದೆ.


Spread the love

Exit mobile version