Home Mangalorean News Kannada News ಕುಂದಾಪುರ: ಹಳಿಯ ಮೇಲೆ ಮಳೆ ನೀರು – ಗಂಟೆಗೂ ಹೆಚ್ಚು ಕಾಲ ನಿಂತ ರೈಲು

ಕುಂದಾಪುರ: ಹಳಿಯ ಮೇಲೆ ಮಳೆ ನೀರು – ಗಂಟೆಗೂ ಹೆಚ್ಚು ಕಾಲ ನಿಂತ ರೈಲು

Spread the love

ಕುಂದಾಪುರ: ಹಳಿಯ ಮೇಲೆ ಮಳೆ ನೀರು – ಗಂಟೆಗೂ ಹೆಚ್ಚು ಕಾಲ ನಿಂತ ರೈಲು

ತೆಕ್ಕಟ್ಟೆ: ರೈಲು ಹಳಿಯ ಮೇಲೆ ನೀರು ನಿಂತ ಕಾರಣ ರೈಲು ಸಂಚಾರ ಒಂದು ಗಂಟೆಯಷ್ಟು ಸ್ಥಗಿತಗೊಂಡ ಘಟನೆ ಮಂಗಳವಾರ ಕುಂದಾಪುರ ತಾಲೂಕಿನ ಕೆದೂರಿನಲ್ಲಿ ನಡೆದಿದೆ.

ಭಾರಿ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವುದರಿಂದ ಮಳೆ ನೀರು ಹರಿದು ರೈಲ್ವೇ ಟ್ರಾಕ್‌ ಸಂಪೂರ್ಣ ಮುಳುಗಡೆಯಾಗಿತ್ತು. ಇದರಿಂದಾಗಿ ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಮತ್ಸ್ಯಗಂಧ ಎಕ್ಸ್‌ ಪ್ರೆಸ್‌ ರೈಲನ್ನು ಸುಮಾರು ಒಂದು ಗಂಟೆಗಳ ಕಾಲ ನಿಲ್ಲಿಸಲಾಗಿತ್ತು.

ಸ್ಥಳೀಯರ ಸಹಕಾರದಿಂದ ಹಳಿ ಮೇಲಿನ ನೀರನ್ನು ತೆರವುಗೊಳಿಸಿ ನಂತರ ರೈಲು ಪ್ರಯಾಣಕ್ಕೆ ಅನುವು ಮಾಡಿಕೊಡಲಾಯಿತು.


Spread the love

Exit mobile version