Home Mangalorean News Kannada News ಕೆಜಿಎಫ್​ ಯಶಸ್ಸಿಗಾಗಿ ಮಂಜುನಾಥನಿಗೆ ವಿಶೇಷ ಪೂಜೆ ಸಲ್ಲಿಸಿದ ಯಶ್​

ಕೆಜಿಎಫ್​ ಯಶಸ್ಸಿಗಾಗಿ ಮಂಜುನಾಥನಿಗೆ ವಿಶೇಷ ಪೂಜೆ ಸಲ್ಲಿಸಿದ ಯಶ್​

Spread the love

ಕೆಜಿಎಫ್​ ಯಶಸ್ಸಿಗಾಗಿ ಮಂಜುನಾಥನಿಗೆ ವಿಶೇಷ ಪೂಜೆ ಸಲ್ಲಿಸಿದ ಯಶ್​

ಮಂಗಳೂರು: ಬಹುನಿರೀಕ್ಷಿತ ಕೆ.ಜಿ.ಎಫ್. ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ಟೆಂಪಲ್​ ರನ್​ ಮಾಡುತ್ತಿರುವ ರಾಕಿಂಗ್​ ಸ್ಟಾರ್​ ಯಶ್ ಭಾನುವಾರ ಮಧ್ಯಾಹ್ನ ಧರ್ಮಸ್ಥಳದ ಶ್ರೀ ಮಂಜುನಾಥನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ಧರ್ಮಸ್ಥಳಕ್ಕೆ ಭೇಟಿ ನೀಡಿದ ಯಶ್​ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರೆ ಹೆಗ್ಗಡೆ ಅವರನ್ನೂ ಭೇಟಿ ಮಾಡಿದರು. ಕೆಜಿ‌ಎಫ್ ಚಿತ್ರಕ್ಕೆ ಯಶಸ್ಸು ಸಿಗಲೆಂದು ವಿಶೇಷ ಪೂಜೆ ಮಾಡಿದ್ದು, ಬೆಳಗ್ಗೆ ಉಡುಪಿಯ ಕೊಲ್ಲೂರು ಮೂಕಾಂಬಿಕೆಗೂ ವಿಶೇಷ ಪೂಜೆ ಸಲ್ಲಿಸಿದ್ದರು.

ಇದೇ ಶುಕ್ರವಾರದಂದು ಕೆ.ಜಿ.ಎಫ್​. ಸಿನಿಮಾ ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಈಗಾಗಲೇ ಚಿತ್ರದ ಟ್ರೇಲರ್ ಹಾಗೂ ಲಿರಿಕಲ್​ ವಿಡಿಯೋ ಸಾಂಗ್​ ಭಾರಿ ಸದ್ದು ಮಾಡುತ್ತಿದೆ. ಕೆ.ಜಿ.ಎಫ್​. ಯಶ್​ ವೃತ್ತಿ ಜೀವನದ ವಿಶೇಷ ಸಿನಿಮಾ ಆಗಿದ್ದು, ಬರೋಬ್ಬರಿ 5 ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಉಗ್ರಂ ಖ್ಯಾತಿಯ ಪ್ರಶಾಂತ್​ ನೀಲ್​ ಅವರು ಕೆ.ಜಿ.ಎಫ್​. ಚಿತ್ರದ ಕತೆ ಬರೆದು ನಿರ್ದೇಶಿಸಿದ್ದಾರೆ.


Spread the love

Exit mobile version