ಗಣೇಶ ಚತುರ್ಥಿ: ಉಡುಪಿ – ದಕ ಜಿಲ್ಲೆಗಳಿಗೆ ಸೆ. 19ರಂದು ಸರ್ಕಾರಿ ರಜೆ ಘೋಷಣೆ

Spread the love

ಗಣೇಶ ಚತುರ್ಥಿ: ಉಡುಪಿ – ದಕ ಜಿಲ್ಲೆಗಳಿಗೆ ಸೆ. 19ರಂದು ಸರ್ಕಾರಿ ರಜೆ ಘೋಷಣೆ

ಉಡುಪಿ: ಗಣೇಶ ಚತುರ್ಥಿಯ ಪ್ರಯುಕ್ತ ಉಡುಪಿ ಜಿಲ್ಲೆಯಲ್ಲಿ ಸಪ್ಟೆಂಬರ್ 18 ರ ಬದಲಾಗಿ 19 ರಂದು ಮಂಗಳವಾರ ರಜೆ ನೀಡಲು ಸರ್ಕಾರ ಆದೇಶ ಹೊರಡಿಸಿದೆ.

ರಾಜ್ಯದಲ್ಲಿ ಗಣೇಶ ಹಬ್ಬದ ಆಚರಣೆಯ ದಿನದ ಕುರಿತು ಗೊಂದಲಗಳಿದ್ದು ಹಲವೆಡೆ ಸೋಮವಾರ ಸೆಪ್ಟೆಂಬರ್ 18 ರಂದು ಹಬ್ಬ ಆಚರಿಸುತ್ತಿದ್ದರೆ, ಕೆಲವಡೆ ಮಂಗಳವಾರ ಸಪ್ಟೆಂಬರ್ 19 ರಂದು ಆಚರಿಸಲಾಗುತ್ತಿದೆ.

ಕರಾವಳಿ ಜಿಲ್ಲೆಗಳಲ್ಲಿ ಮಂಗಳವಾರ ಹಬ್ಬ ಆಚರಿಸುವ ಕಾರಣ ಅದೇ ದಿನ ಸರ್ಕಾರಿ ರಜೆ ನೀಡಬೇಕು ಎಂದು ಕೂಗು ಕೇಳಿಬಂದಿತ್ತು. ಈ ಬಗ್ಗೆ ಜನಪ್ರತಿನಿಧಿಗಳು ಕೂಡಾ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಮುಖ್ಯ ಕಾರ್ಯದರ್ಶಿ ಮತ್ತು ಜಿಲ್ಲಾಧಿಕಾರಿಯವರಿಗೆ ಸೆ.19ರಂದು ರಜೆ ನೀಡಲು ಪತ್ರ ಮೂಲಕ ತಿಳಿಸಿದ್ದರು. ಇದೀಗ ಸರ್ಕಾರದ ಅಧಿಕೃತ ಆದೇಶ ಬಂದಿದ್ದು ಸೆ.19ರಂದು ರಜೆ ನೀಡಲು ಸೂಚಿಸಲಾಗಿದೆ


Spread the love

Leave a Reply

Please enter your comment!
Please enter your name here