Home Mangalorean News Kannada News ತೀರ್ಥಹಳ್ಳಿ-ಮಲ್ಪೆ ರಾ.ಹೆ. ದುರಸ್ಥಿಗೆ ಶೋಭಾ ಕರಂದ್ಲಾಜೆಗೆ ಸಚಿವ ಪ್ರಮೋದ್ ಆಗ್ರಹ

ತೀರ್ಥಹಳ್ಳಿ-ಮಲ್ಪೆ ರಾ.ಹೆ. ದುರಸ್ಥಿಗೆ ಶೋಭಾ ಕರಂದ್ಲಾಜೆಗೆ ಸಚಿವ ಪ್ರಮೋದ್ ಆಗ್ರಹ

Spread the love

ತೀರ್ಥಹಳ್ಳಿ-ಮಲ್ಪೆ ರಾ.ಹೆ. ದುರಸ್ಥಿಗೆ ಶೋಭಾ ಕರಂದ್ಲಾಜೆಗೆ ಸಚಿವ  ಪ್ರಮೋದ್  ಆಗ್ರಹ

ಉಡುಪಿ: ರಾಷ್ಟ್ರೀಯ ಹೆದ್ದಾರಿ 169 ಎ ತೀರ್ಥಹಳ್ಳಿ ಮಲ್ಪೆ ರಸ್ತೆಯ  ಮಲ್ಪೆ ಬಂದರಿನಿಂದ ಕರಾವಳಿ ಜಂಕ್ಷನ್  – ಉಡುಪಿ – ಮಣಿಪಾಲ – ಪರ್ಕಳ – ವರೆಗೆ ರಸ್ತೆಯು  ಈ ವರ್ಷದ ಮಳೆಯಿಂದ ತೀವ್ರವಾಗಿ ಹಾನಿಗೊಂಡಿರುವುದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ.

ಹಾನಿಗೊಂಡ ರಸ್ತೆಯ ಭಾಗವನ್ನು ತುರ್ತಾಗಿ ಡಾಮರು ಪ್ಯಾಚ್ ನಡೆಸಬೇಕಾಗಿ  ರಾಷ್ಟ್ರೀಯ ಹೆದ್ದಾರಿ ವಿಭಾಗದ ಇಂಜಿನಿಯರ್‍ಗಳಲ್ಲಿ ಹಾಗೂ ಉಡುಪಿ ಸಂಸದರಾದ ಶೋಭಾ ಕರಂದ್ಲಾಜೆಯವರಲ್ಲಿ ಮೀನುಗಾರಿಕಾ ಹಾಗೂ ಯುವಸಬಲೀಕರಣ ಮತ್ತು ಕ್ರೀಡಾ ಸಚಿವರಾದ  ಪ್ರಮೋದ್ ಮಧ್ವರಾಜ್‍ರವರು  ಆಗ್ರಹಿಸಿರುತ್ತಾರೆ.  ಎಂದು  ತಮ್ಮ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.


Spread the love
1 Comment
Lallu
8 years ago

SHOBA ONLY “ARBHATA” ON COMMUNAL CLASHES !!!

wpDiscuz
Exit mobile version