ತೆಂಕನಿಡಿಯೂರು ಗ್ರಾಪಂ ಗೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಭೇಟಿ
ಉಡುಪಿ: ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ದಿನಕರ ಹೇರೂರು ಅವರು ತೆಂಕನಿಡಿಯೂರು ಗ್ರಾಮ ಪಂಚಾಯತ್ ಗೆ ಭೇಟಿ ನೀಡಿದರು

ಈ ವೇಳೆ ಏಕವಿನ್ಯಾಸ ಸಮಸ್ಯೆ ಬಗ್ಗೆ ಮತ್ತು ಸರಕಾರ ನೀಡಿದ ನಿವೇಶನದಲ್ಲಿ ಕಟ್ಟಡ ಪ್ರಾರಂಭಿಕ ಪ್ರಮಾಣ ಪತ್ರದ ಸಮಸ್ಯೆಯನ್ನು ಚರ್ಚಿಸಲಾಯಿತು . ಹಾಗೂ ನಗರ ಪ್ರಾಧಿಕಾರದಲ್ಲಿನ ಅನುದಾನಕ್ಕೆ ಬೇಡಿಕೆಯನ್ನು ಸಲ್ಲಿಸಲಾಯಿತು .
ಮನವಿಯನ್ನು ಸ್ವೀಕರಿಸಿದ ಅಧ್ಯಕ್ಷರಾದ ದಿನಕರ ಹೇರೂರು ಕಾಮಗಾರಿಯನ್ನು ಮಾಡಿಸುವ ಭರವಸೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷರಾದ ಶೋಭಾ ಡಿ. ನಾಯ್ಕ ಉಪಾಧ್ಯಕ್ಷರಾದ ಅರುಣ ಜತ್ತನ್ , ಸದಸ್ಯರಾದ ಪ್ರಖ್ಯಾತ್ ವಿ. ಶೆಟ್ಟಿ, ವಿನೋದ ಸುವರ್ಣ, ವೆಂಕಟೇಶ ಕುಲಾಲ್, ರವಿರಾಜ್, ಪ್ರಥ್ವಿರಾಜ್ ಶೆಟ್ಟಿ ಮೀನಾ ಲೋರಿನಾ ಪಿಂಟೋ, ಅನುಷಾ, ಶರತ್ ಕುಮಾರ್ ಶಟ್ಟಿ, ಸತೀಶ್ ನಾಯ್ಕ ಉಪಸ್ಥಿತರಿದ್ದರು.