Home Mangalorean News Kannada News ದ.ಕ, ಉಡುಪಿ ಮತ್ತು ಕೊಡಗು ಜಿಲ್ಲಾ ಬಿಜೆಪಿ ಪದಾಧಿಕಾರಿಗಳಿಗೆ ಮಾಹಿತಿ ಕಾರ್ಯಗಾರ

ದ.ಕ, ಉಡುಪಿ ಮತ್ತು ಕೊಡಗು ಜಿಲ್ಲಾ ಬಿಜೆಪಿ ಪದಾಧಿಕಾರಿಗಳಿಗೆ ಮಾಹಿತಿ ಕಾರ್ಯಗಾರ

Spread the love

ದ.ಕ, ಉಡುಪಿ ಮತ್ತು ಕೊಡಗು ಜಿಲ್ಲಾ ಬಿಜೆಪಿ ಪದಾಧಿಕಾರಿಗಳಿಗೆ ಮಾಹಿತಿ ಕಾರ್ಯಗಾರ

ಮಂಗಳೂರು : ಡಾ| ಬಿ.ಆರ್. ಅಂಬೇಡ್ಕರ್ ರವರ 125ನೇ ಜನ್ಮ ಶತಾಬ್ದಿಯನ್ನು ಈ ವರ್ಷ ದೇಶದಲ್ಲಿ ವಿಶೇಷವಾಗಿ ಆಚರಿಸುತ್ತಾ ಸಂವಿಧಾನ ಶಿಲ್ಪಿ, ದಲಿತರ ಉದ್ದಾರಕ , ಮುತ್ಸದ್ಧಿ ರಾಜಕಾರಣಿ ಮತ್ತು ಸಮಾಜವಾದಿಯಾಗಿರುವ ಡಾ| ಬಿ.ಆರ್.ಅಂಬೇಡ್ಕರ್ ರವರು ಈ ದೇಶಕ್ಕೆ ನೀಡಿರುವ ಅಪಾರ ಕೊಡುಗೆಯನ್ನು ಮತ್ತು ಹಿಂದು ಸಮಾಜದ ಮೇಲೆ ಇದ್ದ ಅಪಾರ ವಿಶ್ವಾಸ ಮತ್ತು ಶ್ರದ್ಧೆಯನ್ನು ನೆನಪಿಸುವ ಮತ್ತು 2016ರ ಕಾಲಘಟ್ಟದಲ್ಲೂ ಈ ದೇಶದಲ್ಲಿ ಬೇರೂರಲ್ಪಟ್ಟ ಸಾಮಾಜಿಕ ಪಿಡುಗಾದ ಅಶ್ಪರ್ಸತೆಯನ್ನು ಹೋಗಲಾಡಿಸಲು, ದಲಿತರನ್ನು ಸಮಾಜದ ಮುಖ್ಯ ವಾಹಿನಿಗೆ ತರುವುದಕ್ಕಾಗಿ ಕಾರ್ಯಕರ್ತರನ್ನು ಸಜ್ಜುಗೊಳಿಸುವ ಅನೇಕ ಕಾರ್ಯಕ್ರಮಗಳನ್ನು ಭಾ.ಜ.ಪಾ ಹಮ್ಮಿಕೊಂಡಿದೆ.

bjp-meeting-mangalore-00

ದೇಶದ ಎಲ್ಲಾ ಗ್ರಾಮ ಜಿಲ್ಲೆ , ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ 2016ರ ಸಪ್ಟೆಂಬರ್ 25ರಿಂದ 2017ರ ಎಪ್ರಿಲ್ 14ರವರೆಗೆ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ದ.ಕ, ಉಡುಪಿ ಮತ್ತು ಕೊಡಗು ಜಿಲ್ಲಾ ಬಿಜೆಪಿ ಪದಾಧಿಕಾರಿಗಳಿಗೆ ಕಾರ್ಯಕ್ರಮದ ಬಗ್ಗೆ ಮಾಹಿತಿ ಕೊಡುವ ವಿಭಾಗ ಮಟ್ಟದ ಕಾರ್ಯಗಾರ ದ.ಕ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆಯಿತು.

ಈ ಕಾರ್ಯಗಾರವನ್ನು ಉದ್ಘಾಟನೆಗೊಳಿಸುತ್ತಾ ಕಾರ್ಕಳ ಶಾಸಕರಾದ ಸುನಿಲ್ ಕುಮಾರ್ ರವರು , ಸಂವಿಧಾನ ಶಿಲ್ಪಿ ಡಾ| ಬಿ.ಆರ್.ಅಂಬೇಡ್ಕರ್‍ರವರನ್ನು ಸ್ವಾತಂತ್ರ್ಯ ಪೂರ್ವದಲ್ಲಿ ಮತ್ತು ನಂತರದಲ್ಲಿ ಕಾಂಗ್ರೆಸ್ ಪಕ್ಷ ಅವಮಾನಿಸಿದ ರೀತಿ, ಸ್ವಾರ್ಥಕ್ಕೆ ಬಳಸಿಕೊಂಡ ರೀತಿ ಮತ್ತು ಅವರು ಈ ದೇಶಕ್ಕೆ ನೀಡಿದ ಅಪಾರ ಕೊಡುಗೆಯನ್ನು ಮತ್ತು ಯಾವುದೇ ಮೀಸಲಾತಿ, ಸಮಾಜದ ಸಹಾಯಕತೆಗಳು ಇಲ್ಲದ ಮತ್ತು ಇಡೀ ಸಮಾಜವೇ ಬಹಿಷ್ಕರಿಸಿದ ಸಂದರ್ಭದಲ್ಲೂ ಉನ್ನತ ಶಿಕ್ಷಣವನ್ನು ಪಡೆದು ಈ ದೇಶದ ಸಂವಿಧಾನವನ್ನು ರಚನೆ ಮಾಡುವ ಎತ್ತರಕ್ಕೆ ಬೆಳೆದ ಒಬ್ಬ ಮಹಾನ್ ವ್ಯಕ್ತಿಯಾಗಿ ರೂಪುಗೊಂಡ ಕ್ಷಣವನ್ನು ವಿವರಿಸುತ್ತ , ರಾಷ್ಟ್ರ ಕಟ್ಟುವ ಅವರ ಸಂಕಲ್ಪವನ್ನು ನಾವೆಲ್ಲರು ಈ ಕಾರ್ಯಕ್ರಮದ ಮುಖಾಂತರ ಸಹಕಾರಗೊಳಿಸಬೇಕೆಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಈ ಕಾರ್ಯಗಾರದಲ್ಲಿ ದಿಕ್ಸೂಚಿ ಭಾಷಣವನ್ನು ಮಾಡಿದ ರಾಜ್ಯ ಬಿಜೆಪಿ ಉಪಾಧ್ಯಕ್ಷರು ಮತ್ತು ಉತ್ತರ ಕನ್ನಡ ಸಂಸದರಾದ ಅನಂತಕುಮಾರ್ ಹೆಗಡೆ ಮಾತನಾಡಿ ಈ ಸಾಮಾಜಿಕ ಪಿಡುಗಾದ ಅಶ್ಪರ್ಸತೆ 1857ರಿಂದಲೇ ರಾಜಕೀಯ ಷಡ್ಯಂತ್ರದ ಭಾಗವಾಗಿ ಮೂಡಿ ಬಂದು ಸಮಾಜವನ್ನು ಹೊಡೆಯುವ ಕೆಟ್ಟ ಸಂಸ್ಕ್ರತಿ ಪ್ರಾರಂಭವಾಗಿದೆ. ಇಡೀ ದೇಶದಲ್ಲಿ ಸಾಮರಸ್ಯದ ಮುನ್ನುಡಿಯನ್ನು ಬರೆದ, ಸಂಘ ಪರಿವಾರದ ಈ ಕಾರ್ಯಕ್ರಮ ಕೇವಲ ಪಕ್ಷದ ಕಾರ್ಯಕ್ರಮವಾಗಿರದೆ , ದಲಿತರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ರಾಷ್ಟ ಕಾರ್ಯವಾಗಬೇಕು ಮತ್ತು ಹಣಕೋಸ್ಕರ ಕೆಲಸ ಮಾಡುವ ಬಾಡಿಗೆ ದೇಶದ್ರೋಹಿಗಳು ಮತ್ತು ಎನ್.ಜಿ.ಓ ಗಳು ಈ ರಾಷ್ಟ್ರದ ಸಾರ್ವಬೌಮತೆಗೆ ದಕ್ಕೆ ತರಲು ಮಾಡುವ ಈ ಪಿಡುಗನ್ನು ಸಮಾಜದಿಂದ ಮುಕ್ತವಾಗಿಸಲು ನಾವೆಲ್ಲರೂ ಪಣ ತೊಟ್ಟು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಎಂಬ ಕಿವಿ ಮಾತನ್ನು ಕಾರ್ಯಕರ್ತರಿಗೆ ಹೇಳಿದರು.

ಈ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಕ್ಯಾ|ಗಣೇಶ್ ಕಾರ್ಣಿಕ್, ರಾಜ್ಯ ಬಿಜೆಪಿ ಕಾರ್ಯದರ್ಶಿ ತಿಂಗಳೆ ವಿಕ್ರಮಾರ್ಜುನ ಹೆಗಡೆ, ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್ , ದ.ಕ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು ಮತ್ತು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರು ರತ್ನಕರ ಹೆಗ್ಡೆ ಉಪಸ್ಥಿತರಿದ್ದರು.

ದ.ಕ , ಉಡುಪಿ ಮತ್ತು ಕೊಡಗು ಜಿಲ್ಲೆಯ ಎಲ್ಲಾ ಪದಾಧಿಕಾರಿಗಳು, ಮಂಡಲದ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಗಳು, ಎಲ್ಲಾ ಮೋರ್ಚಾದ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಗಳು , ಮಾಜಿ ಶಾಸಕರುಗಳು ಮತ್ತು ಜಿಲ್ಲಾ ಕಾರ್ಯಕಾರಿಣಿ ಸದಸ್ಯರು ಪಾಲ್ಗೊಂಡಿದ್ದರು.


Spread the love

Exit mobile version