ನವರಾತ್ರಿ ಹಾಗೂ ದಸರಾ ಪ್ರಯುಕ್ತ ಸೆ. 30ರಿಂದ ಬದಲಿ ರಸ್ತೆ ವ್ಯವಸ್ಥೆ

Spread the love

ನವರಾತ್ರಿ ಹಾಗೂ ದಸರಾ ಪ್ರಯುಕ್ತ ಸೆ. 30ರಿಂದ ಬದಲಿ ರಸ್ತೆ ವ್ಯವಸ್ಥೆ

ಮಂಗಳೂರು: ನವರಾತ್ರಿ ಹಾಗೂ ದಸರಾ ಪ್ರಯುಕ್ತ ಕಾನೂನು ಸುವ್ಯವಸ್ಥೆ, ವಾಹನಗಳ ಸುಗಮ ಸಂಚಾರ ಹಾಗೂ ಸಾರ್ವಜನಿಕ ಸುರಕ್ಷತೆಯ ದೃಷ್ಠಿಯಿಂದ ಭಾರತೀಯ ಮೋಟಾರು ವಾಹನ ಕಾಯ್ದೆ 1988 ಕಲಂ 115 ಮತ್ತು 116ರಲ್ಲಿ ಪ್ರದತ್ತ ಅಧಿಕಾರವನ್ನು ಚಲಾಯಿಸಿ ಪೆÇಲೀಸ್ ಆಯುಕ್ತರೂ ಆಗಿರುವ ಅಪರ ದಂಡಾಧಿಕಾರಿ ಎನ್. ಶಶಿಕುಮಾರ್ ಅವರು ಇದೇ ಸೆ.30 ರಿಂದ ಅಕ್ಟೋಬರ್ 06ರವರೆಗೆ ಮಂಗಳಾದೇವಿ ದೇವಸ್ಥಾನದ ವಾಹನ ಸಂಚಾರದಲ್ಲಿ ತಾತ್ಕಾಲಿಕ ಮಾರ್ಪಾಡು ಮಾಡಿ ಬದಲಿ ವ್ಯವಸ್ಥೆ ಸೂಚಿಸಿ ಆದೇಶಿಸಿದ್ದಾರೆ.

ಬದಲಿ ವ್ಯವಸ್ಥೆ ವಿವರ:

ಮಂಗಳೂರು- ಮಹಾನವಮಿ 1ನೇ ಬ್ರಿಡ್ಜ್ ಕಡೆಯಿಂದ ಮಂಗಳಾದೇವಿ ಕಡೆಗೆ ಬರುವ ರೂಟ್ ನಂಬರ್ 27ರ ಬಸ್ಸುಗಳು ಕಾಸಿಯಾ ಜಂಕ್ಷನ್ ಮುಖೇನಾ ಮಂಗಳಾದೇವಿ ಕಡೆಗೆ ಮೋರ್ಗನ್ಸ್ ಗೇಟ್ ಕಡೆಯಿಂದ ಮುಳಿಹಿತ್ಲು ಜಂಕ್ಷನ್ ಮುಖೇನಾ ಮಂಗಳಾದೇವಿ ಕಡೆಗೆ ಬರುವ ರೂಟ್ ನಂಬರ್ 4ಸಿ, 4ಎಫ್, 6ಅಡಿ, 11ಸಿ, 14ಸಿ, 15, 15ಎ ಬಸ್ಸುಗಳು ಜೆಪ್ಪು ಮಾರ್ಕೆಕ್‍ನಿಂದ ಕಾಸಿಯಾ ಜಂಕ್ಷನ್ ಮೂಲಕ ಮಂಗಳಾದೇವಿ ಕಡೆಗೆ ಬಂದು ಕಾಂತಿ ಚರ್ಚ್ ಮುಂಭಾಗದಲ್ಲಿ ಪ್ರಯಾಣಿಕರನ್ನು ಇಳಿಸಿ ಹತ್ತಿಸಿಕೊಂಡು ಅದೇ ರಸ್ತೆಯಲ್ಲಿ ಏಕಮುಖವಾಗಿ ಮುಂದಕ್ಕೆ ಮುಳಿಹಿತ್ಲು ಕ್ರಾಸ್ ರಸ್ತೆಯಲ್ಲಿ ಮುಂದುವರಿದು ಮೋರ್ಗನ್ಸ್ ಗೇಟ್ ಮುಖಾಂತರ ಮುಂದಕ್ಕೆ ಚಲಿಸುವುದು.

ಮೋರ್ಗನ್ಸ್ ಗೇಟ್ ಕಡೆಯಿಂದ ಮುಳಿಹಿತ್ಲು ಮುಖೇನ ಮಂಗಳಾದೇವಿ ದೇವಸ್ಥಾನದ ಕಡೆಗೆ ಎಲ್ಲಾ ಬಸ್ಸುಗಳ ಪ್ರವೇಶವನ್ನು ನಿμÉೀಧಿಸಲಾಗಿದೆ.

ಮಂಕಿ ಸ್ಟ್ಯಾಂಡ್ ಕಡೆಯಿಂದ ಮಂಗಳಾದೇವಿ ದೇವಸ್ಥಾನದ ಕಡೆಗೆ ಎಲ್ಲಾ ರೀತಿಯ ಸರಕು ಸಾಗಾಣಿಕೆ ವಾಹನಗಳ ಪ್ರವೇಶವನ್ನು ಸೆ.30 ರಿಂದ ಅಕ್ಟೋಬರ್ 6ರವರೆಗೆ ನಿμÉೀಧಿಸಲಾಗಿದೆ. ಈ ಎಲ್ಲಾ ಸರಕು ವಾಹನಗಳು ಮಂಕಿ ಸ್ಟ್ಯಾಂಡ್, ಮಾರ್ನಮಿಕಟ್ಟೆ 1ನೇ ಕ್ರಾಸ್, ಬ್ರಿಡ್ಜ್ ಮುಖೇನ ಮುಂದಕ್ಕೆ ಸಾಗುವುದು.

ಮೋರ್ಗನ್ಸ್ ಗೇಟ್ ಕಡೆಯಿಂದ ಮಂಗಳಾದೇವಿ ಕಡೆಗೆ ಸಂಚರಿಸುವ ಎಲ್ಲಾ ಸರಕು ಸಾಗಾಣಿಕೆ ವಾಹನಗಳು ಬೋಳಾರ ರಸ್ತೆ ಮುಖೇನ ಸ್ಟೇಟ್ ಬ್ಯಾಂಕ್ ಕಡೆಗೆ ಸಂಚರಿಸುವುದು.


Spread the love