ಪಂಚಾಯತ್ ಶಿಫಾರಸು ಮಾಡಿದಲ್ಲಿ ಮುಂದಿನ ಬಾರಿ ಶಿರ್ವ ಪಟ್ಟಣ ಪಂಚಾಯತ್ ಮಾಡಲು ಪ್ರಯತ್ನ : ಸೊರಕೆ

Spread the love

ಪಂಚಾಯತ್ ಶಿಫಾರಸು ಮಾಡಿದಲ್ಲಿ ಮುಂದಿನ ಬಾರಿ ಶಿರ್ವ ಪಟ್ಟಣ ಪಂಚಾಯತ್ ಮಾಡಲು ಪ್ರಯತ್ನ : ಸೊರಕೆ

ಕಾಪು: ಪಂಚಾಯತ್ ಶಿಫಾರಸು ಮಾಡಿದ್ರೆ ಮುಂದಿನ ದಿನಗಳಲ್ಲಿ ಶಿರ್ವವನ್ನು ಪಟ್ಟಣ ಪಂಚಾಯತ್ ಮಾಡುವ ಯೋಜನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಹೇಳಿದ್ದಾರೆ.

ಶಿರ್ವದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.ಕಾಪು ಕ್ಷೇತ್ರಕ್ಕೆ ಶಿರ್ವ ಕೇಂದ್ರ ಸ್ಥಳವಾಗಿದ್ದು ಶಿರ್ವ ಪಟ್ಟಣ ಪಂಚಾಯತ್ ಮಾಡುವಷ್ಟು ಎಲ್ಲಾ ಅರ್ಹತೆವನ್ನು, ಅವಕಾಶವನ್ನು ಹೊಂದಿದೆ. ಪಂಚಾಯತ್ ಶಿಫಾರಸು ಮಾಡಿದರೆ ಶಿರ್ವಕ್ಕೆ ಇನ್ನಷ್ಟು ಮೂಲಭೂತ ಸೌಕರ್ಯಗಳನ್ನು ಒದಗಿಸಿ ಪಟ್ಟಣ ಪಂಚಾಯತ್ ಆಗಿ ಸುಂದರ ಶಿರ್ವವನ್ನು ಮಾಡಲು ಸಾಧ್ಯವಿದೆ ಎಂದು ಹೇಳಿದರು.

ಜನಸಂಪರ್ಕ ಸಭೆ, ಪಂಚಾಯತ್ ಭೇಟಿ ಮಾಡೋದು ಇದು ಶಾಸಕರ ಜವಬ್ದಾರಿ. ನಾನು ಶಾಸಕನಾಗಿದ್ದಾಗ ಮೂರು ತಿಂಗಳಿಗೊಮ್ಮ ಪಂಚಾಯತ್ ಗೆ ಭೇಟಿ ಕೊಡೋದು. ಜನ ಸಂಪರ್ಕ ಸಭೆಯಲ್ಲಿ ಪಾಲ್ಗೊಂಡು ಸ್ಥಳೀಯ ಪಂಚಾಯತ್ ಸಮಸ್ಯೆಗಳನ್ನು ಆಲಿಸಿ ಪರಿಹಾರ ಒದಗಿಸುವ ಕೆಲಸ ಮಾಡುತ್ತಿದ್ದೆ. ಕಳೆದ 5 ವರ್ಷಗಳಿಂದ ಅವೆಲ್ಲವೂ ನಿಂತು ಹೋಗಿದೆ. .ಕಾಮಗಾರಿಗಳಲ್ಲಿಕಮಿಷನ್ ಹೊಡೆಯೋ ಕೆಲಸ ತಾಲೂಕು ಕಚೇರಿಗಳಲ್ಲಿ ಬ್ರೋಕರ್ ಗಳೇ ತುಂಬಿಹೋಗಿ ಜನರ ಕೆಲಸಗಳು ಆಗುತ್ತಿಲ್ಲ. ಎಲ್ಲದಕ್ಕೂ ಕಡಿವಾಣ ಹಾಕೋ ಕೆಲಸವಾಗಬೇಕಿದ್ದು, ಜನರ ಕೆಲಸಕ್ಕೆ ಆದ್ಯತೆ ಸಿಗಬೇಕಾಗಿದೆ ಎಂದರು.

ಈ ದೇಶದ ಬೆಳವಣಿಗೆಯಲ್ಲಿ ಕಾರ್ಮಿಕ ವರ್ಗದ ಶ್ರಮ ಬಹಳಷ್ಟು ಇದ್ದು, ಕಾರ್ಮಿಕರನ್ನು ತುಳಿಯೋ ಕೆಲಸ ಕೂಡಾ ಆಡಳಿತರೂಡ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದ ಅವರು ಪ್ರಾಕೃತಿಕವಾಗಿ ಮಾನವ ಸಂಪನ್ಮೂಲ ವನ್ನು ಹೊಂದಿದ ಊರು ಕಾಪು. ವಿಭಿನ್ನ ಸಮುದಾಯ ವನ್ನು ಹೊಂದಿದ ಊರು ಕಾಪುವಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಮನೆ ನಿವೇಶನದ ಅರ್ಜಿಬಾಕಿ ಇದೆ.

ಪಾದೂರಿನಲ್ಲಿ ಕಚ್ಛಾ ತೈಲ ಘಟಕದ ಸಂತ್ರಸ್ತರಿಗೆ ದೇಶದಲ್ಲಿ ಎಲ್ಲೂ ಸಿಗದ ಪರಿಹಾರವನ್ನು ಕೊಡಿಸುವ ಕೆಲಸ ತಾನು ಮಾಡಿದ್ದು, ಕೈಗಾರಿಕೆಗಳಲ್ಲಿ ಊರಿನ ಜನರಿಗೆ ಉದ್ಯೋಗ ಕೆಲಸ ಕೊಡೋ ಕೆಲಸ ಹೆಚ್ಚು ಆಗಬೇಕು. ಮನೆಗೊಂದು ಉದ್ಯೋಗ ಕೊಡುವ ಬಂಪರ್ ಯೋಜನೆಯನ್ನು ನಾವು ಮಾಡುವುದಾಗಿ ಹೇಳಿದರು.

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ ಕಾಂಗ್ರೆಸ್ ಸರಕಾರ ಬಂದಲ್ಲಿ ಬಡವರಿಗೆ ಜನಸಾಮಾನ್ಯರಿಗೆ ಸಹಾಯ ಆಗುತ್ತದೆ. ಸೊರಕೆಯವರು ಪ್ರತೀ ಪಂಚಾಯತ್ ಮಟ್ಟಕ್ಕೆ ಬಂದು ಎಲ್ಲಾ ವ್ಯವಸ್ಥೆ ಗಳನ್ನು ಕಲ್ಪಿಸುವ ಕೆಲಸಮಾಡಿದ್ದಾರೆ. ಶಿರ್ವ ಗ್ರಾಮ ಕಾಂಗ್ರೆಸ್ ನ ಭದ್ರಕೋಟೆಯಾಗಿದ್ದು, ಶಿರ್ವ ಗ್ರಾಮದಲ್ಲಿ ಕಾಂಗ್ರೆಸನ ಒಂದು ಓಟು ಈ ಬಾರಿ ಮಿಸ್ ಆಗೋದಿಲ್ಲ ಅನ್ನೊ ನಂಬಿಕೆ ಇದೆ ಎಂದರು.

ಕಾಂಗ್ರೆಸ್ ಮುಖಂಡರಾದ ನವೀನ್ ಡಿಸೊಜ, ರತನ್ ಶೆಟ್ಟಿ, ನವೀನ್ ಚಂದ್ರ ಶೆಟ್ಟಿ, ದಿನೇಶ್ ಕೋಟ್ಯಾನ್ , ಜಿತೇಂದ್ರ ಪುಟಾರ್ಡೊ, ಪ್ರಕಾಶ್, ಗೀತಾ ವಾಗ್ಲೆ, ಪ್ರಭಾ ಶೆಟ್ಟಿ,ಪ್ರಶಾಂತ್ ಜತ್ತನ್,ವಿಲ್ಸನ್ ಮೊದಲಾದವರು ಉಪಸ್ಥಿತರಿದ್ದರು.


Spread the love